ದೃಷ್ಟಿಲಾಭ

Author : ವಿ.ಎಂ. ಇನಾಂದಾರ್

Pages 119




Year of Publication: 1937
Published by: ಕರ್ನಾಟಕ ವೈಭವ ಪ್ರಕಟಣಾ ಮಂದಿರ
Address: ವಿಜಾಪುರ

Synopsys

ಮರಾಠಿ ಸಾಹಿತ್ಯ ವಲಯದ ಪ್ರಸಿದ್ಧ ಚಿಂತಕ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಸ. ಖಾಂಡೇಕರ್ ಅವರ ಆಯ್ದ ಮರಾಠಿ ಕಥೆಗಳಲ್ಲಿಯ 10 ಕಥೆಗಳನ್ನು ಆಯ್ದು ಕನ್ನಡಕ್ಕೆ ಚಿಂತಕ ವಿ.ಎಂ. ಇನಾಂದಾರ ಅವರು ಅನುವಾದಿಸಿದ್ದೇ ಈ ಕೃತಿ-ದೃಷ್ಟಿಲಾಭ.

ಕಥೆಯ ವಸ್ತು ವೈವಿಧ್ಯತೆ, ನಿರುಪಣಾ ಕೌಶಲ್ಯದಿಂದ ಈ ಕಥೆಗಳು ಆಕರ್ಷಣೆ ಹೊಂದಿವೆ. ಎರಡು ಚಿತ್ರಗಳು, ಅವಳ ಕಣ್ಣುಗಳು, ರಾತ್ರಿಯ ದಿವಸವಾದರೆ, ಕಲ್ಲೆದೆಯ ಕಂಬನಿಗಳು, ಚಂದ್ರಕಲೆ, ಸೇತುವೆ, ಕುರುಡನ ಭಾವಬಿದಿಗೆ ಹಾಗೂ ದೃಷ್ಟಿಕೋನ ಹೀಗೆ 10 ಕಥೆಗಳನ್ನು ಅನುವಾದಿಸಲಾಗಿದೆ.

‘ನಾನು ಜನರಾಡುವ ಮಾತಿಗೆ ದೂರವಾಗಿರದೇ, ಗ್ರಂಥಸ್ಥ ಭಾಷೆಗೆ ಅವಶ್ಯವಾದ ಕೆಲವಾದರೂ ಕಟ್ಟುಗಳುಳ್ಳ ಒಂದು ಮಧ್ಯಮ ಮಾರ್ಗವನ್ನು ಕಲ್ಪಿಸಿಕೊಳ್ಳಲಿಕ್ಕೆ ಯತ್ನಿಸಿದ್ದೇನೆ’ ಎಂದು ಅನುವಾದಕರು ತಮ್ಮ ಅನುವಾದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About the Author

ವಿ.ಎಂ. ಇನಾಂದಾರ್
(01 October 1913 - 26 January 1986)

ಬೆಳಗಾವಿ ತಾಲೂಕಿನ ಹುದಲಿಯವರಾದ ವಿ.ಎಂ. ಇನಾಂದಾರ್  ಅವರ ಪೂರ್ಣ ಹೆಸರು ವೆಂಕಟೇಶ್ ಮಧ್ವರಾವ ಇನಾಂದಾರ್. ಎಂ.ಎ. ಪದವಿ ಪಡೆದ ನಂತರ ಕೆಲಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿದ ಅವರು 1940ರಲ್ಲಿ ಅಧ್ಯಾಪಕ ವೃತ್ತಿಗೆ ಬಂದರು. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಿವೃತ್ತರಾದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಕವಿತೆ, ನಾಟಕ, ಕಥೆ, ಪ್ರವಾಸಿ ಲೇಖನ, ವಿಮರ್ಶೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಮೂರಾಬಟ್ಟೆ, ಚಿತ್ರಲೇಖಾ, ಕನಸಿನ ಮನೆ ಮನೆ, ಮಂಜು ಮುಸುಕಿದ ದಾರಿ, ಈ ಪರಿಯ ಸೊಬಗು, ಸ್ವರ್ಗದ ಬಾಗಿಲು, ಎರಡು ಧ್ರುವ, ಮೋಹಿನಿ, ನವಿಲು ನೌಕೆ, ಯಾತ್ರಿಕರು, ಬಿಡುಗಡೆ (ಕಾದಂಬರಿ), ಕಾಳಿದಾಸನ ಕಥಾ ನಾಟಕಗಳು, 'ಪಾಶ್ಚಾತ್ಯ ...

READ MORE

Related Books