ಪಂಡಿತನ ನೆರಳು ಮತ್ತು ಇತರೆ ಕಥೆಗಳು

Author : ಜಿ.ಪಿ. ರಾಜರತ್ನಂ

Pages 110

₹ 1.00




Year of Publication: 1946
Published by: ಸತ್ಯಶೋಧನ ಪ್ರಕಟನ ಮಂದಿರ
Address: ಕೋಟೆ, ಬೆಂಗಳೂರು

Synopsys

ಜಿ.ಪಿ. ರಾಜರತ್ನಂ ಅವರು ಅನುವಾದಿಸಿದ ಸಣ್ಣ ಕಥೆಗಳ ಸಂಕಲನ. ಇಲ್ಲಿ ಒಟ್ಟು 4 ಕಥೆಗಳಿವೆ. ಅರಸನ ಕನಸು, ಪಂಡಿತನ ನೆರಳು, ಚಿಕ್ಕ ಮೀನಕನ್ಯೆ ಹಾಗೂ ಕುರುಪಿಯಾದ ಮರಿಬಾತು-ಇವು ಕಥೆಗಳ ಶೀರ್ಷಿಕೆಗಳು. ಅರಸನ ಕನಸು-ಜಾರ್ಜಿಯಾ ದೇಶದ ಜನಪದ ಸಾಹಿತ್ಯದಲ್ಲಿ ಪಡೆದುಕೊಂಡಿದ್ದರೆ ಉಳಿದವು ಡೆನ್ಮಾರ್ಕ ದೇಶದ ಹ್ಯಾನ್ಸ್ ಕ್ರಿಶ್ಚಿಯನ್ ಅಂಡರ್ ಸನ್ ಎಂಬಾತನ ಕಥೆಗಳ ಅನುವಾದವಾಗಿವೆ. ಇವು ಫೇರಿ ಟೇಲ್ಸ್ (ಕಿನ್ನರಿ ಕಥೆಗಳು) ಎಂದೇ ಪ್ರಸಿದ್ಧಿ ಪಡೆದಿವೆ. ನಮ್ಮಲ್ಲಿಯ ಪಂಚತಂತ್ರದ ಕಥೆಗಳಿದ್ದ ಹಾಗೆ, ಈಸೋಪನ ಫೆಬಲ್ಸ್ ಗಳಿದ್ದ ಹಾಗೆ, ಸಂಸ್ಕೃತ ಸಾಹಿತ್ಯದಲ್ಲಿರುವಂತೆ ‘ಅನ್ಯಾಪದೇಶ’ ಗಳಂತೆ ಈ ಕಿನ್ನರಿ ಕಥೆಗಳು ಎಲ್ಲ ಜಾಯಮಾನದವರಿಗೂ ಆಕರ್ಷಣೀಯವಾಗಿವೆ. ವ್ಯಾವಹಾರಿಕ ನೀತಿ ಹಾಗೂ ಅಧ್ಯಾತ್ಮವನ್ನೂ ಈ ಕಥೆಗಳು ತಮ್ಮ ಒಡಲಲ್ಲಿಟ್ಟುಕೊಂಡಿವೆ. ಈ ನಾಲ್ಕೂ ಕಥೆಗಳು ಫೆಬಲ್ಸ್ (ಪಶುಪಕ್ಷಿಗಳ ಕಥೆಗಳು), ಪ್ಯಾರಾಬಲ್ಸ್ (ಉಪಮಾನ, ಕಥೆ, ದೃಷ್ಟಾಂತ) ಹಾಗೂ ಅಲಿಗರಿ (ರೂಪಕ ಕಥೆ) ಜಾತಿಗೆ ಸೇರಿವೆ. ಮಕ್ಕಳಿಗೆ ರಂಜನೀಯ ಕಥೆಗಳಾದರೆ ದೊಡ್ಡವರಿಗೆ ಲೋಕನೀತಿಯ ಪಾಠಗಳಾಗಿವೆ ಎಂದು ಲೇಖಕರು  ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books