ಜನಮನ ನಾಯಕ

Author : ಮಹಾಬಲೇಶ್ವರ ರಾವ್

Pages 248

₹ 225.00




Year of Publication: 2018
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

‘ಜನಮನ ನಾಯಕ’ ಪ್ರಕಾಶ್ ಅಯ್ಯರ್ ಅವರ ಕೃತಿಯ ಕನ್ನಡಾನುವಾದ. ಹಿರಿಯ ಲೇಖಕ ಮಹಾಬಲೇಶ್ವರರಾವ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಿಜ ಜೀವನಕ್ಕೆ ಸ್ಪೂರ್ತಿ ತುಂಬುವ ಕತೆಗಳು ಸಂಕಲನಗೊಂಡಿವೆ. ಪರಿಣಾಮಕಾರಿ, ವೃತ್ತಿಪರ ಆತ್ಮೀಯ ನಾಯಕತ್ವ ರೂಪುಗೊಳ್ಳುವ ಬಗೆಯನ್ನು ಪ್ರಕಾಶ್ ಅಯ್ಯರ್ ಜಗತ್ತಿನಾದ್ಯಂತದಿಂದ ಆಯ್ದು ತೆಗೆದ ಸ್ವಾರಸ್ಯಕರ ಅಖ್ಯಾನಗಳು ಹಾಗೂ ಸಾಮತಿಗಳ ಮೂಲಕ ಚೇತೋಹಾರಿಯಾಗಿ ನಿರೂಪಿಸಿದ್ದಾರೆ.

ಚಾಲಕ, ತಾಯಿ ಜಿರಾಫೆ, ಅಬ್ರಾಹಂ ಲಿಂಕನ್, ಫುಟ್ಬಾಲ್ ಆಟಗಾರರು- ಹೀಗೆ ವೈವಿಧ್ಯಮಯವಾದ ಮೂಲಗಳಿಂದ ಅವರು ಪಾಠಗಳನ್ನು ಆಯ್ದುಕೊಂಡಿದ್ದಾರೆ. ಆಹಾರದಂಗಡಿಯಲ್ಲಿ ಬರ್ಗರ್ ಗಳನ್ನು ತಟ್ಟುತ್ತಾ ನಾಯಕತ್ವದ ಗುಣವನ್ನು ದಿಢೀರ್ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಿಮ್ಮೊಳಗಿನ ನಾಯಕನನ್ನು ಪ್ರಕಾಶಕ್ಕೆ ತರಲು ಈ ಎಲ್ಲ ಕತೆಗಳು ಸ್ಫೂರ್ತಿದಾಯಕವಾಗಿವೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books