
ಬಂಗಾಳಿ ಭಾಷೆಯ ಮಹಾನ್ ಲೇಖಕರಲ್ಲಿ ಒಬ್ಬರಾದ ರವೀಂದ್ರನಾಥ ಠಾಕೂರರ ಕಥಾಮಂಜರಿಯ ಮೂರು ಸಂಪುಟಗಳಲ್ಲಿ ಮೊದಲನೆ ಸಂಪುಟವಾದ ಇದನ್ನು ಅಹೋಬಲ ಶಂಕರ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಒಟ್ಟು 33 ಕಥೆಗಳು ಇವೆ. ಸಾಮಾನ್ಯವಾದಂತಹ ಘಟನೆಗಳನ್ನೇ ತೆಗೆದುಕೊಂಡು ಭಾವನೆಗಳ ಜಾಲವನ್ನೇ ಕಟ್ಟುವಂತಹ ಸ್ನಾನಘಟ್ಟದ ಕಥೆ, ಮಕ್ಕಳ ಮನಸ್ಸನ್ನು ವಿವರಿಸುವ ಯಜಮಾನಿಯಂತಹ ಕಥೆ, ಬಾಲ್ಯದ ಆದರ್ಶಗಳನ್ನು ನೆಚ್ಚಿಕೊಂಡು ಬಾಲ್ಯಸ್ನೇಹಿತೆಯನ್ನೂ ತಿರಸ್ಕರಿಸಿ, ಕೇವಲ ಶಾಲಾಮಾಸ್ತರನಾಗಿ ಕಾಲವಶಾತ್ ಮತ್ತೆ ಅವಳನ್ನು ಸಂಧಿಸಿದಾಗಿನ ಮಧುರ ಕ್ಷಣಗಳನ್ನು ಹೇಳುವ ಒಂದು ರಾತ್ರಿ ಹೀಗೆ ಸರಳವಾದರೂ ಮನಸೆಳೆವ ಕಥೆಗಳು ಈ ಸಂಪುಟದಲ್ಲಿ ಮೂಡಿ ಬಂದಿದೆ.
©2025 Book Brahma Private Limited.