ಸರಸವಾಣಿಯ ಗಿಣಿಗಳು

Author : ಕೆ. ನಲ್ಲತಂಬಿ

Pages 136

₹ 160.00




Year of Publication: 2023
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ #326, `ಚೈತ್ರ\', ಮೊದಲನೇ ಮಹಡಿ, 5ನೇ ತಿರುವು, 5ನೇ ಬ್ಲಾಕ್, ಬನಶಂಕರಿ 3ನೇ ಹಂತ, ಭುವನೇಶ್ವರಿ ನಗರ, ಬೆಂಗಳೂರು-560085
Phone: 9740069123 / 9739561334

Synopsys

ಪ್ರಸ್ತುತ ತಮಿಳಿನಿಂದ ಕನ್ನಡಕ್ಕೆ ಬಂದ ಕೆ. ನಲ್ಲತಂಬಿಯವರ ಎರಡನೇ ಅನುವಾದಿತ ಸಣ್ಣ ಕತೆಗಳ ಗುಚ್ಛ ‘ಸರಸವಾಣಿಯ ಗಿಣಿಗಳು’. ಹತ್ತು ಕತೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ವೈವಿಧ್ಯತೆಯಿದೆ. ಬೇರೆ ಬೇರೆ ಕಾಲಘಟ್ಟಗಳಲ್ಲಿ ಮೈದಾಳಿರುವಂತೆ ಕಾಣುವ ಇಲ್ಲಿನ ಕತೆಗಳಲ್ಲಿ, ಮರು ವ್ಯಾಖ್ಯಾನಕ್ಕೊಳಪಟ್ಟ ಎಂಟನೇ ಶತಮಾನದ ಧಾರ್ಮಿಕ ಸಂಕಟ ಮತ್ತು ಸಂಘರ್ಷಗಳ ಐತಿಹಾಸಿಕ-ಪೌರಾಣಿಕ ಕಥನ, ಬದಲಾವಣೆಯ ಹೊಸ್ತಿಲಲ್ಲಿ ನಿಂತು ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಸ್ಥಿತ್ಯಂತರಕ್ಕೊಳಗಾದ ಹಳ್ಳಿಯ ಮುಗ್ಧ ಪರಿಸರ ಹಾಗೂ ಇವತ್ತಿನ ಕಾರ್ಪೋರೇಟ್ ಜಗತ್ತು ಎಂದು ಮೂರು ಹಂತದಲ್ಲಿ ವಿಸ್ತಾರಗೊಂಡ ಕಥಾಲೋಕವೊಂದು ಅನಾವರಣಗೊಂಡಿದೆ. ವಿಶಿಷ್ಟ ದೃಷ್ಟಿಕೋನದ ಹಾಗೂ ವಿಭಿನ್ನ ಆಯಾಮದ ಕಥನಕ್ರಮವನ್ನು ಅನುಸರಿಸಿರುವ ಕೆಲ ಹೊಸ ಮಾದರಿಯ ಕತೆಗಳನ್ನು ಕಾಣಲೂ ಇಲ್ಲಿ ಸಾಧ್ಯವಿದೆ. ವಾಸ್ತವ ತಳಹದಿಯಲ್ಲಿ ಮೂಡಿ ಬಂದ ಕತೆಗಳ ನೈಜ ಸಂಗತಿಗಳಷ್ಟೇ ಸಹಜವಾಗಿ, ವಾಸ್ತವದ ಪಾತಳಿ ಬಿಟ್ಟು ವಾಸ್ತವೇತರ ನೆಲೆಯನ್ನು ಸ್ವರ್ಶಿಸುತ್ತಾ ಭ್ರಾಮಕ ಲೋಕದ ಅವಾಸ್ತವಿಕ ಘಟನೆಗಳನ್ನು ಒಳಗೊಂಡ ಕತೆಗಳು ಕೂಡಾ ತಮ್ಮ ನೆಲೆಯನ್ನು ಸುಭದ್ರವಾಗಿ ಪಡೆದುಕೊಂಡಿವೆ. ನೋಡನೋಡುತ್ತಲೇ ಸರಳ ಕತೆಗಳು ಸಾಂಕೇತಿಕವಾಗಿ ನಿಗೂಢಾರ್ಥವನ್ನು ಧ್ವನಿಸುವಂತಹ ಉದಾಹರಣೆಗಳೂ ಸಿಗುತ್ತವೆ.

About the Author

ಕೆ. ನಲ್ಲತಂಬಿ

ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಪ್ರಮುಖರು. ಮನೆ ಭಾಷೆ ತಮಿಳು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಅಸ್ತಿತ್ವ  ಕಂಡು ಕೊಂಡವರು. ಅವರ ಪೂರ್ಣ ಹೆಸರು ಕಾಳಿಮುತ್ತು ನಲ್ಲತಂಬಿ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿ, ತಮ್ಮ ಭಾಷಾಂತರ ಕುಶಲತೆಯಿಂದ ಕನ್ನಡ ಮತ್ತು ತಮಿಳು ಸಾಹಿತ್ಯಾಸಕ್ತರಿಗೆ ಎರಡೂ ಭಾಷೆಗಳ ಸೊಗಡನ್ನು ಉಣ್ಣಿಸುತ್ತಿದ್ದಾರೆ. ಅರ್ಧನಾರೀಶ್ವರ, ಹುಣಿಸೆಮರದ ಕಥೆ, ಹಳ್ಳ ಬಂತು ಹಳ್ಳ, ಯಾದ್ವಶೇಮ್, ಕಡುಗು ವಾಂಗಿ ವಂದವಳ್ (ಸಾಸಿವೆ ತಂದವಳು) ಅವರ ಅತ್ಯಂತ ಗಮನಾರ್ಹ ಅನುವಾದಿತ ಕೃತಿಗಳು. ‘ಕೋಶಿ’ಸ್‌ ಕವಿತೆಗಳು’ ಅವರ ಸ್ವತಂತ್ರ ಕವನ ಸಂಕಲನ. ...

READ MORE

Related Books