ಸ್ವಾತಂತ್ಯ್ರಪೂರ್ವ ಶಿಕಾರಿ ಕತೆಗಳು

Author : ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)

Pages 194

₹ 200.00




Year of Publication: 2022
Published by: ಕಾವ್ಯಕಲಾ ಪ್ರಕಾಶನ
Address: # 12873, 7ನೇ ಕ್ರಾಸ್, ಚಂದ್ರ‌ ಲೇಔಟ್ ವಿಜಯನಗರ, ಬೆಂಗಳೂರು-560040
Phone: 8694912860

Synopsys

ಸ್ವಾತಂತ್ಯ್ರಪೂರ್ವದ ಅವಧಿಯಲ್ಲಿ ಶಿಕಾರಿಗಳಿಗೆ ಸಂಬಂಧಿಸಿದ ಕತೆಗಳನ್ನು ಸಂಗ್ರಹಿಸಿ, ಇತರೆ ಭಾಷೆಗಳಲ್ಲಿದ್ದರೆ ಅವುಗಳನ್ನು ಅನುವಾದಿಸಿ ಲೇಖಕ ಗಿರೀಶ್ ತಾಳಿಕಟ್ಟೆ ಅವರು ಸಂಕಲಿಸಿದ ಕೃತಿ-ಸ್ವಾತಂತ್ಯ್ರಪೂರ್ವ ಶಿಕಾರಿ ಕತೆಗಳು. ದೇಶಕ್ಕೆ ಸ್ವಾತಂತ್ಯ್ರ ಬಂದಾಗಿನಿಂದ ಶಿಕಾರಿಗೆ ಸಂಬಂಧಿಸಿದಂತೆ ಕಾನೂನು ನಿಯಮಗಳೂ ಬಿಗಿಯಾಗಿ, ಶಿಕಾರಿ ಚಟುವಟಿಕೆಗಳನ್ನೇ ನಿರ್ಬಂಧಿಸಲಾಗಿದೆ. ಆದರೆ, ಸ್ವಾತಂತ್ಯ್ರಪೂರ್ವ ಅವಧಿಯಲ್ಲಿ ಇನ್ನೂ ಸಣ್ಣ ಸಣ್ಣ ಸಂಸ್ಥಾನಗಳ ಅರಸು ಮನೆತನಗಳು ಇದ್ದವು. ಆ ಅರಸರು ವನ್ಯಜೀವಿಗಳನ್ನು ಬೇಟೆಯಾಡುವುದು ಶೌರ್ಯದ ಭಾಗವೆಂತಲೂ ತಿಳಿಯುತ್ತಿದ್ದರು. ಶಿಕಾರಿಗೆ ಹೋದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಕಥೆಯಾಗಿಸಿ, ಅಂದಿನ ಪ್ರಚಲಿತದಲ್ಲಿದ್ದ ಸಾಮಾಜಿಕ ವಿವಿಧ ಆಯಾಮಗಳನ್ನು, ಶಿಕಾರಿ ಕುರಿತಂತೆ ಜನರ ನಂಬುಗೆಗಳನ್ನು ಪರಿಚಯಿಸುವುದು, ಇತಿಹಾಸದ ದೃಷ್ಟಿಯಿಂದಲೂ ಇಂತಹ ಪ್ರಸಂಗಗಳು ಹತ್ತು ಹಲವು ನೆಲೆಯಲ್ಲಿ ಪೂರಕ ಆಕರಗಳನ್ನು ಈ ಕತೆಗಳು ಪೂರೈಸುತ್ತವೆ. ಈ ಹಿನ್ನೆಲೆಯಲ್ಲಿ, ಕಥೆಗಳಾದರೂ ಇವು ಇತಿಹಾಸದ ನಂಟಿನೊಂದಿಗೆ ತಳಕು ಹಾಕಿಕೊಂಡಿದ್ದರಿಂದ ಸಾಹಿತ್ಯ ಹಾಗೂ ಇತಿಹಾಸದ ಮೌಲ್ಯಗಳನ್ನು ಒಳಗೊಂಡಿವೆ.

About the Author

ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)
(13 November 1984)

ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಕಾವಲು ಇವರ ಹುಟ್ಟೂರು. ಉದ್ಯೋಗ ಸ್ಫೂರ್ತಿ, ಜಾಬ್‌ನ್ಯೂಸ್, ಗೌರಿ ಲಂಕೇಶ್ ವಾರಪತ್ರಿಕೆ ಮೊದಲಾದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಆರಕ್ಷಕ ಲಹರಿ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ), ಜೆನ್ ಕಥೆಗಳು, ...

READ MORE

Related Books