ಛತ್ರಪತಿ ಶಿವಾಜಿ

Author : ಚ. ವಾಸುದೇವಯ್ಯ

Pages 65

₹ 70.00




Year of Publication: 1925
Published by: ಕಾವ್ಯಾಲಯ ಪ್ರಕಾಶನ
Address: ಮೈಸೂರು

Synopsys

‘ಛತ್ರಪತಿ ಶಿವಾಜಿ’ ಚ. ವಾಸುದೇವಯ್ಯ ಅವರ ವ್ಯಕ್ತಿಚಿತ್ರಣ ಕುರಿತ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕರ್ಣಾಟಕದಲ್ಲಿ ಯ ದ್ರಾವಿಡ ದೇಶದಲ್ಲಿಯೂ ಬಿಜಾಪುರ ಸಂಸ್ಥಾನದವರು ಅನೇಕ ನಾಡುಗಳನ್ನು ಗೆದ್ದಿದ್ದರು. ರಣದುಲ್ಲಾಖಾನ ನೆಂಬವನು ಆ ನಾಡುಗಳಿಗೆಲ್ಲಕ್ಕೂ ಆ ಸಂಸ್ಥಾನದವರ ಕಡೆಯ ಅಧಿಕಾರಿ ಯಾಗಿದ್ದನು. ಅವನು 168ಲ್ಲಿ ದಂಡೆತ್ತಿ ಬ೦ದು ಯಲಹ೦ಕ ನಾಡಿನ ಪ್ರಭುವಾದ. ಕೆಂಪೇಗೌಡನಿಂದ ಬೆಂಗಳೂರನ್ನು ತೆಗೆದುಕೊ೦ಡನು. ಅವನ ತರುವಾಯ ಸುಲ್ತಾನನು ರಣದುಲ್ಲಾಖಾನನ ಸ್ಥಾನದಲ್ಲಿ ಷಾಹಜಿ ಯನ್ನು ನೇಮಿಸಿ, ಅವನು ಕರ್ನಾಟಕ ಯುದ್ಧದಲ್ಲಿ ತೋರಿಸಿದ ಪರಾ ಕ್ರಮಕ್ಕೆ ಮೆಚ್ಚಿ ಕೋಲಾರ, ಹೊಸಕೋಟೆ, ಬೆಂಗಳೂರು, ಬಳ್ಳಾಪುರ, ತೀರ ಎ೦ಬ ಊರುಗಳನ್ನು ಜಹಗೀರನ್ನಾಗಿ ಕೊಟ್ಟರು. ಮೊದಲು ಸಾಹಜಿ ಬೆಂಗಳೂರಲ್ಲಿ ವಾಸಮಾಡುತ್ತಿದ್ದು, ತರುವಾಯ ಯುದ್ಧ ಕಾಲ ಗಳಲ್ಲಿ ಹೊರತು ಮಿಕ್ಕ ಕಾಲಗಳಲ್ಲಿ ಕೋಲಾರದಲ್ಲಿಯಾಗಲಿ ದೊಡ್ಡ ಬಳ್ಳಾಪುರದಲ್ಲಿ ಯಾಗಲಿ ವಾಸ ಮಾಡುತ್ತಿದ್ದನು. ಈ ರೀತಿಯಲ್ಲಿ ಷಾಹಜಿ ಯು ಸುಲ್ತಾನನ ಅನುಗ್ರಹವನ್ನು ಸಂಪಾದಿಸಿ ದಿನ ದಿನಕ್ಕೆ ವೃದ್ಧಿಗೆ ಬ೦ದು ಕಡೆಗೆ ರಾಜನೆಂಬ ಬಿರುದನ್ನೂ ಪಡೆದು ತಂಜಾವೂರನ್ನು ಗೆದ್ದು ಅಲ್ಲಿಯೇ ತನ್ನ ಮಗ ವೆಂಕೋಜಿಗೆ ಬೇರೊಂದು ರಾಜ್ಯವನ್ನು ಕಟ್ಟಿದನು ಎನ್ನುವ ವಿಚಾರವನ್ನು ಕೃತಿಯನ್ನು ಒಳಗೊಂಡಿದೆ.

About the Author

ಚ. ವಾಸುದೇವಯ್ಯ
(02 August 1852 - 26 December 1943)

ಸಾಹಿತಿ, ಹೊಸಗನ್ನಡ ಭಾಷಾ ಸಾಹಿತ್ಯದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ವಾಸುದೇವಯ್ಯನವರು 1852 ಆಗಸ್ಟ್‌ 02 ರಂದು ಚನ್ನಪಟ್ಟಣದಲ್ಲಿ ಜನಿಸಿದರು. ಸೆಂಟ್ರಲ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ವಿದ್ಯಾ ಇಲಾಖೆಯ ಇನ್‌ಸ್ಪೆಕ್ಟರ್‌ ಜೆನರಲ್‌ ಕಚೇರಿಯಲ್ಲಿ ಗುಮಾಸ್ತರಾಗಿ, ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಇವರು ಮಕ್ಕಳಿಗಾಗಿ ಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದರು. ಬಂಗಾಳಿ ಭಾಷೆಯ ರಾಜಪುತ್ರ ಮಹಿಮೆ ಕೃತಿಯನ್ನು ಆರ್ಯಕೀರ್ತಿ ಭಾಗ-೧ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದರು. ಆರ್ಯಕೀರ್ತಿ ಭಾಗ-೨, ಭೀಷ್ಮನ ಸತ್ಯ ಪ್ರತಿಜ್ಞೆ ಸೇರಿದಂತೆ ಹಲವು ಕೃತಿಗಳನ್ನು ...

READ MORE

Related Books