ನೆನಪು ಏಕತಾರಿ

Author : ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

Pages 428

₹ 500.00




Year of Publication: 2023
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

‘ನೆನಪು ಏಕತಾರಿ’ ವಿವಿಧ ವ್ಯಕ್ತಿಚಿತ್ರಗಳ ರಾಗಮಾಲೆ ವೈದೇಹಿ ಅವರ ಕೃತಿ. ಈ ಕೃತಿಗೆ ಲೇಖಕ ಮನು ದೇವದೇವನ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ..ಬರಹಗಾರರು, ಪಂಡಿತರು, ಹೋರಾಟಗಾರರು ಮಾತ್ರವಲ್ಲ, ಅಪರಿಚಿತ ಮತ್ತು ಅನಾಮಧೇಯ ವ್ಯಕ್ತಿಗಳೊಂದಿಗೆ ಓರ್ವ ಸೂಕ್ಷ್ಮಜ್ಞ ಲೇಖಕಿಯು ಹೊಂದಿದ ಭಾವನಾತ್ಮಕ, ವೈಚಾರಿಕ, ಪ್ರೀತಿಯ ಹಾಗೂ ಆಪ್ತ ಸಂಬಂಧದ ಪ್ರತಿಫಲನ - ನೆನಪು ಏಕತಾರಿ. ಇಲ್ಲಿ ಲೇಖನಗಳು, ಪ್ರಬಂಧಗಳು, ಕವನಗಳು, ಸಂದರ್ಶನಗಳಿವೆ. ಇಲ್ಲಿನ ಲೇಖಕರು, ಚಿಂತಕರು, ಕವಿಗಳು ವೈದೇಹಿಯವರ ಅಂತರಂಗದೊಂದಿಗೆ ತಂತು ಬೆಸೆದುಕೊಂಡವರು. ಇದರೆಲ್ಲ ಒಳನೋಟಗಳೂ ಹೊಮ್ಮುವುದು ವೈದೇಹಿಯವರ ವ್ಯಕ್ತಿನಿಷ್ಠ ನೆಲೆಯಿಂದ. ತಾನು ಬರೆಯುವ ವ್ಯಕ್ತಿಗಳ ಕುರಿತಿರುವ ಗೌರವಪೂರ್ಣ ಲಲಿತ ನೋಟದಿಂದಾಗಿ ವೈದೇಹಿಯವರ ಗದ್ಯ ಅವರ ಕುರಿತ ಬರಹಗಳನ್ನು ಸುಗಂಧಪೂರಿತ ಪುಷ್ಪಗಳಂತೆ ಅರಳಿಸುತ್ತದೆ. ವೈಯಕ್ತಿಕ ಹಾಗೂ ವೈಚಾರಿಕ ಆಯಾಮಗಳು ಸಾವಯವವಾಗಿ ಒಂದಕ್ಕೊಂದು ಬೆಸೆದುಕೊಂಡು ಉತ್ಕೃಷ್ಟವಾಗಿ ಬಹುಸೂಕ್ಷ್ಮವಾಗಿ ಅನಾವರಣಗೊಳ್ಳುವುದರೊಂದಿಗೆ ಇಲ್ಲಿನ ಪ್ರತಿಯೊಂದು ಲೇಖನವೂ ತನ್ನನ್ನೇ ಮೀರಿಕೊಳ್ಳುವ ಲೇಖಕಿಯ ಗುಣಕ್ಕೆ ಪ್ರಮಾಣದಂತಿದೆ. ಬಹುಮುಖ್ಯವಾಗಿ ಇಲ್ಲಿನ ಬರಹಗಳಲ್ಲಿ ಕಾಣುವ ಸಂಸ್ಕೃತಿ, ಸಾಹಿತ್ಯ, ಸಮಾಜಗಳ ಕುರಿತ ಮಹತ್ವದ ಸಂಗತಿಗಳ ಸಹಜ ಮತ್ತು ನಿರ್ಬಂಧ ಹರಿವು ಕುತೂಹಲಕಾರಿ. ಒಟ್ಟಿನಲ್ಲಿ ಹೇಳಬೇಕೆಂದರೆ, ಕನ್ನಡ ಸಂಸ್ಕೃತಿಗೆ ಹೆಚ್ಚಿನ ಮೌಲ್ಯ, ಅರ್ಥ ಮತ್ತು ಮಹತ್ತನ್ನು ಜೋಡಿಸುವ 'ನೆನಪು ಏಕತಾರಿ ನಿಶ್ಚಯವಾಗಿಯೂ ಒಂದು ಮಾದರಿ ಕೃತಿ ಎಂದಿದ್ದಾರೆ.

About the Author

ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)
(12 February 1945)

ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ.  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...

READ MORE

Related Books