ವರಾಹಮಿಹಿರ

Author : ಟಿ. ಆರ್. ಅನಂತರಾಮು

Pages 48

₹ 20.00




Year of Publication: 2015
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 08040114455

Synopsys

ಪ್ರಾಚೀನ ಭಾರತದ ಪ್ರಮುಖ ಜ್ಞಾನಿಗಳಲ್ಲಿ ವರಾಹಮಿಹಿರಾಚಾರ್ಯ ಕೂಡ ಒಬ್ಬರು. ವರಾಹಮಿಹಿರ ವಿಕ್ರಮಾದಿತ್ಯ ಆಸ್ಥಾನದ ನವರತ್ನಗಳಲ್ಲಿ ಒಬ್ಬರೆಂಬ ಪ್ರತೀತಿಯೂ ಉಂಟು. ಆದರೆ ಪಂಡಿತರು ಮಾಡಿರುವ ಕಾಲನಿರ್ಣಯದ ಪ್ರಕಾರ ಈತ 5-6ನೇ ಶತಮಾನದಲ್ಲಿ ಜೀವಿಸಿದ್ದನೆಂದು ಭಾವಿಸಬಹುದು. ಜ್ಞಾನದ ಅನೇಕ ಶಾಖೆಗಳನ್ನು ಕುರಿತಂತೆ ಪ್ರಚಲಿತವಿದ್ದ ವಿಚಾರಗಳನ್ನು ಒಂದೆಡೆ ಸಂಕಲಿಸಿ, ವಿಶ್ವಕೋಶ ರಚನೆಗೆ ಕಾರಣವಾದವನು. `ಪಂಚ ಸಿದ್ಧಾಂತಿಕ’, `ಬೃಹತ್ ಸಂಹಿತೆ’ ಮತ್ತು `ಬೃಹತ್ ಜಾತಕ’ ಎಂಬ ಅಮೂಲ್ಯ ಕೃತಿಗಳನ್ನು ನೀಡಿದ್ದಾನೆ. ಭೂಮಿ ಗೋಲಾಕಾರವಿರುವುದಾಗಿ ವರಾಹಮಿಹಿರ ಸ್ಪಷ್ಟವಾಗಿ ವಿವರಿಸಿದ್ದಾನೆ. ಗ್ರಹಣ ಕುರಿತು ಅವನ ಅಭಿಪ್ರಾಯ ಸ್ಪಷ್ಟವಾಗಿದೆ. ಚಂದ್ರ ಗ್ರಹಣದಲ್ಲಿ ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸುತ್ತದೆ ಎಂದೂ, ಸೂರ್ಯನ ನೆರಳನ್ನು ಚಂದ್ರ ಪ್ರವೇಶಿಸಿದರೆ ಅದು ಸೂರ್ಯ ಗ್ರಹಣವೆಂದೂ ವೈಜ್ಞಾನಿಕವಾಗಿ ವಿವರಿಸಿದ್ದಾನೆ. ಧೂಮಕೇತುಗಳ ಬಗ್ಗೆಯೂ ಅವನು ದಾಖಲಿಸಿರುವುದು ಅತ್ಯಂತ ಕೌತುಕ. ವರಾಹಮಿಹಿರಾಚಾರ್ಯ ಭೂಕಂಪನಗಳ ಬಗ್ಗೆ, ಅದಕ್ಕಿಂತಲೂ ಹೆಚ್ಚಾಗಿ ಅಂತರ್ಜಲವನ್ನು ಎಲ್ಲೆಲ್ಲಿ ಪರಿಶೋಧಿಸಬೇಕು ಎಂಬುದರ ಬಗ್ಗೆ ಆಗ್ಗೆ ಲಭ್ಯವಿದ್ದ ಎಲ್ಲ ಮಾಹಿತಿಯನ್ನೂ ಕ್ರೋಢಿಕರಿಸಿದ್ದಾನೆ. ಈ ಸಣ್ಣ ಕೃತಿಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಪ್ರಸ್ತಾಪವಿದೆ. 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books