ರಾಷ್ಟ್ರೀಯತೆಯಿಂದ ಮತಾಂಧತೆಗೆ ಒಂದು ಪಯಣ

Author : ಆಗುಂಬೆ ಎಸ್. ನಟರಾಜ್‌

Pages 136

₹ 100.00




Year of Publication: 2009
Published by: ಹಂಸ ಪ್ರಕಾಶನ
Address: 947, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560104
Phone: 9449101086

Synopsys

‘ರಾಷ್ಟ್ರೀಯತೆಯಿಂದ ಮತಾಂಧತೆಗೆ ಒಂದು ಪಯಣ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಕೃತಿ. ಅವರು ಇಂಗ್ಲಿಷ್ ನಲ್ಲಿ secularism, a historical perspective ಶೀರ್ಷಿಕೆಯ ಕೃತಿ ಬರೆದಿದ್ದಾರೆ. 

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಹಲವಾರು ಭಾರತೀಯ ಮುಸ್ಲೀಂ ಗಣ್ಯ ವ್ಯಕ್ತಿಗಳ ಪೈಕಿ ಸಯದ್ ಅಹಮ್ಮದ್ ಖಾನ್, ಇಖ್ಬಾಲ್, ಮೊಹಮ್ಮದ್ ಅಲಿ, ಹಖ್, ಲಿಯಾಖತ್ ಅಲಿ ಖಾನ್ ಮತ್ತು ಜಿನ್ನಾ ಅವರ ಜೀವನ ಚರಿತ್ರೆಗಳನ್ನು ಗಮನಿಸಿ, ಈ  ಆರು ಗಣ್ಯವ್ಯಕ್ತಿಗಳು ಹೇಗೆ ರಾಷ್ಟ್ರೀಯತೆಯಿಂದ ಮತಾಂಧತೆಗೆ ತಮ್ಮ ಪಯಣ ಬೆಳೆಸಿದರು ಎಂಬುದರ ಬಗ್ಗೆ ತಮ್ಮದೇ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿ, ವ್ಯಕ್ತಿ ಚಿತ್ರಣಗಳನ್ನು ನೀಡಿದ್ದಾರೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books