ಕುಲದೀಪಕರು

Author : ಸಿದ್ದವನಹಳ್ಳಿ ಕೃಷ್ಣಶರ್ಮ

Pages 98

₹ 0.00




Year of Publication: 1942
Published by: ಮನೋಹರ ಗ್ರಂಥ ಭಾಂಡಾರ
Address: ಧಾರವಾಡ

Synopsys

ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಲಲಿತ ಸಾಹಿತ್ಯ ಮಾಲೆಯಡಿ ಬರೆದ ವ್ಯಕ್ತಿಚಿತ್ರಗಳ ಸಂಗ್ರಹ-ಕುಲದೀಪಕರು. ಕೃತಿಯನ್ನು ಸಂಪಾದಿಸಿದವರು ಚುಳಕಿ ಗೋವಿಂದರಾಯರು. ಕನ್ನಡದ ಕಿಡಿಗಳು, ದೀಪಮಾಲೆ ಈ ಎರಡು ಕೃತಿಗಳ ನಂತರ ವ್ಯಕ್ತಿಚಿತ್ರಗಳನ್ನೇ ಕೇಂದ್ರವಾಗಿಸಿಕೊಂಡು ಬರೆದ ಕೃತಿಯೇ ಕುಲದೀಪಕರು. `ಸಿದ್ಧವನಹಳ್ಳಿ ಕೃರ್ಷನಶರ್ಮರ ಬರೆಹ ಶೈಲಿಯಲ್ಲಿ ಸವಿಯೂ ಇದೆ. ಸೊಬಗು ಇದೆ. ಇವರು ಶಬ್ದ ಶಿಲ್ಪಿಗಳು. ಇವರ ಭಾಷೆಯು ಸದಾ ಜೀವಂತ. ಬರೆಹದಲ್ಲಿ ಹರಟೆ ಇದೆ ಎಂದರೂ ಅದು ಅನುಭವದಿಂದ ಹದವಾದ ಹರಟೆ' ಎಂದು ಕೃತಿಗೆ ಮುನ್ನುಡಿ ಬರೆದ ಲೀಲಾ ಶಿ. ಕಾರಂತ ಅವರು ಪ್ರಶಂಸಿಸಿದ್ದಾರೆ. ಚಾರ್‍ಲಿ ಆಂಡ್ರೂಸ್, ಗೋಪ ಬಂಧುದಾಸ, ಸಿ.ವಿ.ರಾಮನ್, ಭಿಕ್ಷು ಉತ್ತಮ, ವಿಶ್ವೇಶ್ವರಯ್ಯನವರು, ಸಾಲಾರಜಂಗ್, ಮಾಡಪಾಟಿ ಹನುಮಂತರಾಯರು, ಮಹದೇವ ದೇಸಾಯಿ ಇವರ ವ್ಯಕ್ತಿ ಚಿತ್ರಣಗಳನ್ನು ಈ ಕೃತಿ ಒಳಗೊಂಡಿದೆ.

About the Author

ಸಿದ್ದವನಹಳ್ಳಿ ಕೃಷ್ಣಶರ್ಮ
(31 July 1904 - 02 October 1973)

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...

READ MORE

Related Books