ಕಡಕೋಳ ಮಡಿವಾಳಪ್ಪ

Author : ಮಲ್ಲಿಕಾರ್ಜುನ ಲಠ್ಠೆ

Pages 61

₹ 120.00




Year of Publication: 1994
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ರಿಜಿಸ್ಟಾರ್, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560059
Phone: 80284831333

Synopsys

`ಕಡಕೋಳ ಮಡಿವಾಳಪ್ಪ’ ಎಂ.ಎಸ್ ಲಠ್ಠೆ ಅವರು ಬರೆದಿರುವ ವ್ಯಕ್ತಿಚಿತ್ರಣ ಕೃತಿಯಾಗಿದೆ. ಇಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಮಾಜದಲ್ಲಿ ಸಮಾನತೆ, ಸಾಮರಸ್ಯಗಳು ನೆಲೆಯೂರಬೇಕೆಂಬ ಆಶಯಕ್ಕೆ ಒಂದು ಇತಿಹಾಸವಿದೆ. ವಿವಿಧ ಕಾಲಘಟ್ಟಗಳಲ್ಲಿ ಬದುಕನ್ನು ಅಂತಃ ಕರಣಪೂರ್ವಕವಾಗಿ ಪ್ರೀತಿಸಿದ ಚೇತನಗಳು, ಆರೋಗ್ಯಕರ ಚಲನಶೀಲತೆಗೆ ಒತ್ತಾಸೆಯಾಗಿವೆ. ಇದು ಹೊಸ ಬೆಳಕನ್ನು ಹುಡುಕುವ ಒಂದು ಹೋರಾಟ; ಅಂತೆಯೇ ಇರುವ ಬೆಳಕನ್ನು ಕಾಯ್ದುಕೊಳ್ಳುವ ವಿಶಿಷ್ಟ ಕಾಳಜಿ, ಅದೇ ಸಂದರ್ಭದಲ್ಲಿ ಹಗಲಲ್ಲೇ ಕತ್ತಲು ಮೂಡಿಸುವ ಕರಾಳ ಪ್ರಯತ್ನಗಳಿಗೇನೂ ಕಡಿಮೆಯಿಲ್ಲ. ಬೆಳಕಿನ ಕಿರಣಗಳನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕುವ ಇಂಥ ಸ್ವಾರ್ಥ ಶಕ್ತಿಗಳಿಗೂ ಚಲನಶೀಲ ಪರವಾದ ಚೇತನಗಳಿಗೂ ಮುಖಾಮುಖಿ ಅನಿವಾರ್ಯ. ವ್ಯಕ್ತಿ ಮತ್ತು ಸಂದರ್ಭಗಳಿಗನುಗುಣವಾಗಿ ಮುಖಾಮುಖಿಯ ಸ್ವರೂಪದಲ್ಲಿ ವ್ಯತ್ಯಾಸಗಳಿರಬಹುದು; ಕಾರ್ಯಕ್ಷೇತ್ರಗಳಲ್ಲಿ ವಿಭಿನ್ನತೆಯಿರ ಬಹುದು. ಆದರೆ ಆಯಾ ನೆಲೆಯಲ್ಲಿ ಜಡತೆಯನ್ನು ಮೀರುವ ಮನೋಧರ್ಮ ಮುಖ್ಯವಾಗುವ ಮುಖಾಮುಖಿಯು ಮಹತ್ವದ್ದೇ ಆಗಿರುತ್ತದೆ. ಸಾಮಾಜಿಕ ಸನ್ನಿವೇಶವೊಂದು ಉಂಟುಮಾಡುವ ಸೈದ್ಧಾಂತಿಕ ಮುಖಾಮುಖಿ ಮತ್ತು ಅದರ ಫಲಿತಗಳು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ. ಇದಕ್ಕೂ ಒಂದು ಚರಿತ್ರೆಯಿರುತ್ತದೆ. ಆದ್ದರಿಂದ ಚಾರಿತ್ರಿಕತೆಯನ್ನು ಪರಿಗಣಿಸಿಯೇ ನಾವು ಸಾಮಾಜಿಕ ಚಿಂತನೆಯನ್ನು ಪರಿಶೀಲಿಸುವುದು ಆರೋಗ್ಯಕರವಾದುದು.

About the Author

ಮಲ್ಲಿಕಾರ್ಜುನ ಲಠ್ಠೆ
(12 April 1932 - 19 November 2007)

ಜಾನಪದ ತಜ್ಞ ಮಲ್ಲಿಕಾರ್ಜುನ ಲಠ್ಠೆ ಅವರು 1932 ಏಪ್ರಿಲ್ 12ರಂದು ಬೆಳಗಾವಿ ಜಿಲ್ಲೆಯ ಮುತನಾಳದಲ್ಲಿ ಜನಿಸಿದರು. ತಂದೆ ಶಿವಪ್ಪ, ತಾಯಿ ಬಸವಮ್ಮ. ಬಿ.ಎ. ಆನರ್ಸ್‌ ಪದವಿ ಮತ್ತು ಸ್ನಾತಕೋತ್ತರ ಪದವೀಧರರು. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ತೌಲನಿಕ ಅಧ್ಯಯನ’ಕ್ಕೆ ಪಿಎಚ್.ಡಿ. ಪದವೀಧರರು. ಉಪಾಧ್ಯಾಯರಾಗಿ, ಅಧ್ಯಾಪಕರಾಗಿ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ವಿವಿಧ ಹುದ್ದೆ ಅಲಂಕರಿಸಿದ್ದರು.  ಅಕ್ಕಮಹಾದೇವಿ, ಬಿಜ್ಜ ಮಹಾದೇವಿ, ಹರಿಹರ ಕವಿಯ ರಗಳೆ, ಭೂಮರೆಡ್ಡಿ ಬಸಪ್ಪನವರು, ಶರಣಮಾದಾರ ಚನ್ನಯ್ಯ, ಶಿವಯೋಗಿ ಸಿದ್ಧರಾಮ, ಶರಣರ ಜೀವನ ದರ್ಶನ, ಕನ್ನಡ ಯಾತ್ರೆ, ಕರ್ಮಯೋಗಿ ಎಸ್.ಬಿ. ಪಾಟೀಲ, ಶರಣ ಮೇದಾರ ಕೇತಯ್ಯ ಹೀಗೆ  ಕೃತಿಗಳನ್ನು ...

READ MORE

Related Books