ಸಾಧನೆಯ ಸಮುಚ್ಚಯ ಎಲ್‌. ಶಿವಲಿಂಗಪ್ಪ

Author : ಎಸ್.ಸಿ. ಪಾಟೀಲ

Pages 82

₹ 100.00




Year of Publication: 2010
Published by: ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ
Address: ಧಾರವಾಡ- 1

Synopsys

‘ಸಾಧನೆಯ ಸಮುಚ್ಚಯ ಎಲ್‌. ಶಿವಲಿಂಗಪ್ಪ’ ಕೃತಿಯು ಎಸ್.ಸಿ. ಪಾಟೀಲ ಅವರು ಬರೆದ ವ್ಯಕ್ತಿಚಿತ್ರಣವಾಗಿದೆ. ಇಲ್ಲಿ ಎಲ್‌. ಶಿವಲಿಂಗಪ್ಪ ಅವರ ಕೆಲವು ಸಾಧನೆಗಳನ್ನು ಪರಿಚಯಿಸುವ ಕೆಲಸವನ್ನು ಈ ಕೃತಿಯು ಮಾಡಿದೆ. ಅಷ್ಟೇ ಅಲ್ಲದೇ ಅವರು ಬಿ.ಇ.ಎಂ.ಎಲ್, ಸಂಸ್ಥೆಯಲ್ಲಿದ್ದು ನಾಗರಿಕರಿಗಾಗಿ ಮಾಡಿದ್ದ ಸಮಾಜಮುಖಿ ಹೋರಾಟಗಳನ್ನೂ ತಿಳಿಸುತ್ತದೆ. ವಚನ ಸಾಹಿತ್ಯವನ್ನಾಯ್ದು ಅಲ್ಲಿಯ ವಚನಗಳ ಸಂದರ್ಭಗಳಿಗೆ ತಕ್ಕಂತೆ ಚಿತ್ರರಚನೆಯನ್ನು ಇವರು ಮಾಡಿದ್ದಾರೆ. ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಕಲಾಗ್ಯಾಲರಿಗಳನ್ನು ಸಂದರ್ಶಿಸಿ ಜಗತ್ತಿನ ವೈವಿಧ್ಯಮಯ ಕಲಾಶೈಲಿಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯಲ್ಲಿ ಕಲಾ ಗ್ಯಾಲರಿಯೊಂದನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಇತರ ಕಲಾವಿದರನ್ನು ಗೌರವಿಸುವ ಉದ್ದೇಶದಿಂದ 'ಶಿವ ಕಲಾ ಪ್ರಶಸ್ತಿ'ಯನ್ನು ನೀಡಲು ಈ ವರ್ಷದಿಂದ (2010) ಪ್ರಾರಂಭಿಸಿದ್ದಾರೆ. ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದು, ಅನೇಕ ಪುಸ್ತಕಗಳನ್ನೂ ಬರೆದು ಪ್ರಕಾಶಿಸಿದ್ದಾರೆ. ಮರಳಚ್ಚಿನ ಶಿಲ್ಪ, ಸಿಂಪರಣೆ ಚಿತ್ರ, ವರ್ಣಚಿತ್ರಗಳು, ರೇಖಾಚಿತ್ರಗಳು ಹೀಗೆ ಬಹುಮುಖ ಪ್ರತಿಭೆ ಇವರಲ್ಲಿದೆ ಎನ್ನುವುದನ್ನು ತಿಳಿಸುತ್ತದೆ.

About the Author

ಎಸ್.ಸಿ. ಪಾಟೀಲ

ಡಾ. ಎಸ್. ಸಿ. ಪಾಟೀಲ ಅವರು ಗುಲಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮಾನಶಿವನಗಿಯಲ್ಲಿ 1955ರಲ್ಲಿ ಜನಿಸಿದರು. ಪ್ರಾಥಮಿಕ - ಪ್ರೌಢಶಿಕ್ಷಣಗಳನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿದ ಅವರು ಆನಂತರ ಎಂ.ಎ. ಎಂ.ಎಡ್.ಗಳಲ್ಲದೆ ಚಿತ್ರಕಲೆ ಹಾಗೂ ಶಾಸನಶಾಸ್ತ್ರಗಳಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಜನಪದ ಚಿತ್ರಕಲೆ ಹಾಗೂ ಕಲಾಶಿಕ್ಷಣ ಕುರಿತು ಪ್ರತ್ಯೇಕವಾದ ಎರಡು ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಚಿತ್ರಕಲಾವಿದರಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದು ಆರು ಪುಸ್ತಕಗಳನ್ನು ರಚಿಸಿಕೊಟ್ಟಿರುವುದಲ್ಲದೆ, ಹತ್ತಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕಲೆ ಹಾಗು ಶಿಕ್ಷಣ ಕ್ಷೇತ್ರಗಳಲ್ಲಿ ಕೆಲವು ಪ್ರಶಸ್ತಿ ಪಡೆದಿರುವ ಶ್ರೀಯುತರು ಕೆಲವರ್ಷ ...

READ MORE

Reviews

(ಹೊಸತು, ಜನವರಿ 2011, ಪುಸ್ತಕದ ಪರಿಚಯ)

ಎಲ್. ಶಿವಲಿಂಗಪ್ಪ ಬಹುಶ್ರಮದಿಂದ ಚಿತ್ರಕಲೆ ಮತ್ತು ಅಭ್ಯಾಸಮಾಡಿದ್ದು ಎಲೆಮರೆಯ ಶಿಲ್ಪಕಲೆಯನ್ನು ಕಾಯಿಯಂತೆಯೇ ಉಳಿದಿದ್ದಾರೆ. ಅವರ ಕೆಲವು ಸಾಧನೆಗಳನ್ನು ಪರಿಚಯಿಸುವ ಈ ಪುಸ್ತಕವು ಇವರು ಬಿ.ಇ.ಎಂ.ಎಲ್, ಸಂಸ್ಥೆಯಲ್ಲಿದ್ದು ನಾಗರಿಕರಿಗಾಗಿ ಮಾಡಿದ್ದ ಸಮಾಜಮುಖಿ ಹೋರಾಟಗಳನ್ನೂ ತಿಳಿಸುತ್ತದೆ. ವಚನ ಸಾಹಿತ್ಯವನ್ನಾಯ್ದು ಅಲ್ಲಿಯ ವಚನಗಳ ಸಂದರ್ಭಗಳಿಗೆ ತಕ್ಕಂತೆ ಚಿತ್ರರಚನೆಯನ್ನು ಇವರು ಮಾಡಿದ್ದಾರೆ. ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಕಲಾಗ್ಯಾಲರಿಗಳನ್ನು ಸಂದರ್ಶಿಸಿ ಜಗತ್ತಿನ ವೈವಿಧ್ಯಮಯ ಕಲಾಶೈಲಿಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯಲ್ಲಿ ಕಲಾ ಗ್ಯಾಲರಿಯೊಂದನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಇತರ ಕಲಾವಿದರನ್ನು ಗೌರವಿಸುವ ಉದ್ದೇಶದಿಂದ 'ಶಿವ ಕಲಾ ಪ್ರಶಸ್ತಿ'ಯನ್ನು ನೀಡಲು ಈ ವರ್ಷದಿಂದ (೨೦೧೦) ಪ್ರಾರಂಭಿಸಿದ್ದಾರೆ. ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದು, ಅನೇಕ ಪುಸ್ತಕಗಳನ್ನೂ ಬರೆದು ಪ್ರಕಾಶಿಸಿದ್ದಾರೆ. ಮರಳಚ್ಚಿನ ಶಿಲ್ಪ, ಸಿಂಪರಣೆ ಚಿತ್ರ, ವರ್ಣಚಿತ್ರಗಳು, ರೇಖಾಚಿತ್ರಗಳು ಹೀಗೆ ಬಹುಮುಖ ಪ್ರತಿಭೆ ಇವರಲ್ಲಿದೆ. ಬಹುಕಾಲ ಬೆಂಗಳೂರಿನ ಆಚಾರ್ಯ ಚಿತ್ರಕಲಾ ಭವನವನ್ನು ಮುನ್ನಡೆಸಿದ ಕೀರ್ತಿ ಇವರದು.

Related Books