
ಉಜ್ವಲ ಕಿಡಿಗಳು-ಲೇಖಕ ಅರವಿಂದ ಗುಪ್ತ ಅವರ ಕೃತಿಯನ್ನು ಲೇಖಕಿ ಎಚ್.ಎನ್. ಗೀತಾ ಅವರ ಕನ್ನಡೀಕರಿಸಿದ್ದಾರೆ. ವಿಜ್ಞಾನಿಗಳು ಎಂದರೆ ಪ್ರಯೋಗಾಲಯದಲ್ಲಿ ಪ್ರಯೋಗ ಮಾಡುತ್ತಾ ಒಂಟಿಯಾಗಿ ಕಾಣುವ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ, ವಿಜ್ಞಾನಿಗಳು ಬಹುಮುಖ ವ್ಯಕ್ತಿತ್ವ ಹೊಂದಿದ್ದು, ಸಾಹಿತ್ಯ ವನ್ನೂ ರಚಿಸುತ್ತಿದ್ದರು ಎಂಬ ಅಂಶ ಬೇಗನೇ ಹೊಳೆಯದು. ಕಥೆ-ಕವನ- ಚಿತ್ರಕಲೆ-ಸಂಗೀತ ಕಲೆಯಲ್ಲಿ ಆಸಕ್ತಿ ಇರುತ್ತದೆ. ಹೀಗೆ ಬಹುಮುಖ ವ್ಯಕ್ತಿತ್ವದ ವಿಜ್ಞಾನಿಗಳನ್ನು ಪರಿಚಯಿಸುವುದು ಈ ಕೃತಿಯ ಉದ್ದೇಶ. ವಿಜ್ಞಾನಿಗಳ ಪೈಕಿ ಮಹಿಳೆಯರೂ ಇದ್ದು, ಬದುಕಿನಲ್ಲಿ ಅವಮಾನ, ಹಿಂಸೆ ಸಹಿಸಿಯೂ ಅವರು ಮಾಡಿದ ಸಾಧನೆ ಗಮನಾರ್ಹ. ಇಂತಹ ಸ್ಫೂರ್ತಿಯ ವಿಜ್ಞಾನಿಗಳನ್ನು ಲೇಖಕರು ‘ಉಜ್ವಲ ಕಿಡಿಗಳು’ ಎಂದು ಕರೆದಿದ್ದು, ಪುಸ್ತಕದ ಶೀರ್ಷಿಕೆಯೂ ಆಗಿದೆ. ಈ ಕೃತಿಯಲ್ಲಿ 39 ಭಾರತೀಯ ವಿಜ್ಞಾನಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.
©2025 Book Brahma Private Limited.