
ಕಾಳೀಪಟ್ನಂ ರಾಮಾರಾವ್ ಅವರು ಮೂಲತಃ ಆಂಧ್ರಪ್ರದೇಶದವರು. ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ಧಾರೆ. ಇವರ ರಚನೆಯಲ್ಲಿ ಬಂದ ಒಂಭತ್ತು ಕಥೆಗಳು ಅತಿ ದೀರ್ಘ ಕಥಾನಕಗಳು, ಅತ್ಯಂತ ಚಿಕ್ಕ ತಲೆಬರೆಹಗಳು, ಸಾವಧಾನವಾಗಿ ಸಮಸ್ತವನ್ನು ಪರಿಶೀಲಿಸುವ ಸೂಕ್ಷ್ಮ ವಿವರಗಳು, ಹೀಗೆ ನೂರೆಂಟು ಬಗೆಯ ಪಾತ್ರಗಳನ್ನು ಒಳಗೊಂಡಿರುವಂಥದ್ದು. ಸರಳ-ನಿರಾಳ ನಿರೂಪಣಾ ಶೈಲಿಯ ಇವರ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥಾ ಸಂಕಲನವಾಗಿದೆ. ಇವರ ಕಥೆಗಳು ಕೇವಲ ಕಥೆಗಳಾಗದೇ ಸದ್ದಿಲ್ಲದೆ ಓದುಗನನ್ನು ಒಳಗು ಮಾಡಿಕೊಳ್ಳುವ ವಿಶಿಷ್ಟ ಅನುಭವವನ್ನು ನೀಡುತ್ತವೆ. ಇಂತಹ ವಿಶಿಷ್ಟ ಕಥೆಗಳನ್ನು ಕನ್ನಡಕ್ಕೆ ತಂದವರು ಬರಹಗಾರ, ಅನುವಾದಕರಾದ ಚಿದಾನಂದ ಸಾಲಿಯವರು. ಇವರ ಕನ್ನಡ ಅನುವಾದವೂ ಸಹ ಕನ್ನಡದ ಮನಸ್ಸುಗಳ ಪಾತ್ರಗಳಾಗಿ ಕಾಡುವಷ್ಟರ ಮಟ್ಟಿಗೆ ಬರಹದ ಶೈಲಿ ಮೂಡಿಬಂದಿದೆ.
©2025 Book Brahma Private Limited.