
‘ಬೋಧವೊಂದೆ ಬ್ರಹ್ಮನಾದವೊಂದೆ’ ಶ್ಯಾಮಸುಂದರ ಬಿದರಕುಂದಿ ಅವರು ಸಂಪಾದಿಸಿರುವ ಶ್ರೀ ಶರೀಫ ಶಿವಯೋಗಿಯ ನೂರೊಂದು ಪದರತ್ನಗಳ ಸಂಕಲನ. ಶಿವಯೋಗಿ ಶರೀಫರು ನುಡಿದ ಬೋಧೆಗಳು ಮತ್ತು ತತ್ವಪದಗಳ ಸಂಕಲನ ಇದು. ಶ್ರೀ ಶರೀಫರ ಬೋಧನೆ-ಶಿವಯೋಗ ಹಿರಿಮೆ, ಅಗ್ಗದರಿವಿಯ ತಂದು, ಅದು ನೋಡು ಅದು ನೋಡು, ಅಡಗಿ ಮಾಡುವರೆ ಇಬ್ಬರು ಕೂಡಿ, ಅಪ್ಪಾ ಆರಿಗು ಸಿಗದ ಬದುಕಿನೊಳಿಟ್ಟ, ಅಳಬೇಡಾ ತಂಗಿ ಅಳಬೇಡ, ಅಲ್ಲಿಕೇರಿಗೆ ಹೋಗೊಣು, ಇದೇಮನಿ ಇದೇಮನಿ, ಇದು ಏನು ಸೋಜಿಗವೋ, ಇದೇ ಬ್ರಹ್ಮಜ್ಞಾನ ಸೇರಿದಂತೆ ಶಿವಯೋಗಿ ಶರೀಫರ 101 ತತ್ವಪದಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2025 Book Brahma Private Limited.