ಗೀತಾ ಸಂದೇಶ

Author : ಆಲೂರು ವೆಂಕಟರಾಯ

Pages 164

₹ 1.00




Year of Publication: 1935
Published by: ವೆಂಕಟರಾವ ಭೀ. ಆಲೂರು
Address: ಸಾಧನಕೇರಿ, ಧಾರವಾಡ

Synopsys

ಆಲೂರು ವೆಂಕಟರಾಯ ಅವರು ಬರೆದ ಕೃತಿ-ಗೀತಾ ಸಂದೇಶ. ಶಂಕರ, ಮಧ್ವ ರಂತಹ ವಿದ್ವಾಂಸರು ಗೀತೆ ಕುರಿತು ತಮ್ಮದೇ ನೆಲೆಯಲ್ಲಿ ಚರ್ಚಿಸಿದ್ದಾರೆ. ಆ ವಿಚಾರಗಳನ್ನೂ ಒಳಗೊಂಡು ಈ ಕೃತಿಯಲ್ಲಿ ವಿನೂತನವಾದ ರಚನಾ ಶೈಲಿ ಹಾಗೂ ವಿವೇಚನಾ ಪದ್ಧತಿಯನ್ನು ರೂಪಿಸಿಕೊಂಡಿದ್ದೇವೆ. ಪಾಂಡಿತ್ಯ ಪ್ರದರ್ಶನವು ಇಲ್ಲಿಲ್ಲ. ಗೀತೆಯ ರಸವನ್ನು ವಿವಿದೆಡೆ ವಿವಿಧ ಜನರಿಗೆ ತಲುಪಿಸುವುದೇ ಕೃತಿ ರಚನೆ ಉದ್ದೇಶ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ದಾಸರ ಪದಗಳು, ಅನುಭವಾಮೃತ, ಶೂನ್ಯ ಸಂಪಾದನೆ, ಕೈವಲ್ಯ ಕಲ್ಪವಲ್ಲರಿ, ಬಸವಣ್ಣನವರು ಹೀಗೆ ಇವರ ಸಾಹಿತ್ಯದಲ್ಲಿಯ ಅವತರಣಿಕೆಗಳಿಂದ ಗ್ರಂಥವನ್ನು ಓದುವಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲಾಗಿದೆ. ಗೀತೆಯಲ್ಲಿಯ ಕೆಲ ಕ್ಲಿಷ್ಟ ಪರಿಕಲ್ಪನೆಗಳನ್ನು ಸರಳವಾಗಿಸಲೂ ಯತ್ನಿಸಲಾಗಿದೆ. ಗೀತೆಯ ತಳಹದಿಯ ತತ್ವಗಳು, ಧರ್ಮಾಧರ್ಮ, ಸರ್ವವೂ ಅಭವದಧೀನವು, ಸನ್ವೂಯಾಸ ಮತ್ತು ನಿಷ್ಕಾಮ ಕರ್ಮ, ಗೀತೆಯೂ ಸನಾತನ ಸಂಸ್ಕೃತಿಯೂ, ಗೀತೆಯ ಸಮತೂಕವು ಹೀಗೆ ವಿವಿಧ ಪರಿಕಲ್ಪನೆಯ ಅಧ್ಯಾಯಗಳ ಮೂಲಕ ಗೀತೆಯ ಸಾರವನ್ನು ಚರ್ಚಿಸಲಾಗಿದೆ.

About the Author

ಆಲೂರು ವೆಂಕಟರಾಯ
(12 July 1880 - 25 February 1964)

‘ಕರ್ನಾಟಕದ ಕುಲಪುರೋಹಿತ’ ಎನಿಸಿದ ಆಲೂರು ವೆಂಕಟರಾಯರು ಕನ್ನಡ -ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವರು. ಧಾರವಾಡದಲ್ಲಿ 1880ರ ಜುಲೈ 12ರಂದು ಜನಿಸಿದ ವೆಂಕಟರಾಯರ ತಂದೆ ಭೀಮರಾಯ, ತಾಯಿ ಭಾಗೀರಥಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. (1903, ಎಲ್ಎಲ್ ಬಿ (1905) ಪದವಿ ಪಡೆದರು. ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಆಲೂರು ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದಕ್ಕಾಗಿ ವಕೀಲಿವೃತ್ತಿ ಕೈ ಬಿಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ...

READ MORE

Related Books