ಗೀತಾ ಪರಿಮಳ

Author : ಆಲೂರು ವೆಂಕಟರಾಯ

Pages 175

₹ 1.00




Year of Publication: 1936
Published by: ವೆಂಕಟರಾವ ಭೀ. ಆಲೂರು
Address: ಸಾಧನಕೇರಿ, ಧಾರವಾಡ

Synopsys

ಆಲೂರು ವೆಂಕಟರಾಯರು ಭಗವದ್ಗೀತೆ ಕುರಿತು ಬರೆದ ಕೃತಿ- ಗೀತಾ ಪರಿಮಳ. ಲೇಖಕರದ್ದೇ ಆದ ಗೀತ ಕುಸುಮ ಮಂಜರಿ ಗ್ರಂಥಮಾಲೆಯಡಿ ಗೀತೆಗೆ ಸಂಬಂಧಿಸಿದ ವಿವಿಧ ಕೃತಿಗಳನ್ನು ಪ್ರಕಟಿಸಿದ್ದು, ಆ ಪೈಕಿ ‘ಗೀತಾ ಪರಿಮಳ’ ವೂ ಒಂದು. ಕೃತಿಯಲ್ಲಿ ರಣ ಕೋಲಾಹಲ-ಮನ ಕೋಲಾಹಲ, ಶ್ರೀ ಕೃಷ್ಣನ ಉತ್ತರ, ಈ ವಿಷಾದಕ್ಕೂ ನಮಗೂ ಸಂಬಂಧವೇನು?, ಇಂತಹ ವಿಚಾರಗಳನ್ನುಕೇಂದ್ರೀಕರಿಸಿ ಓದುಗರ ಸಂಶಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಳವಾಗಿ ಬರೆದ ಕೃತಿ ಇದು.

ದಾಸರು, ಶರಣರು, ಜೈನ ಮುನಿಗಳ ಸಂದೇಶವೂ ಗೀತೆಯೊಂದಿಗೆ ಹೋಲುವ ರೀತಿಯನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ. ಗೀತೆಯ ವಿವೇಚನಾ ಪದ್ಧತಿ, ಮಹಾಭಾರತದ ಮಹತ್ವ; ಅದರಲ್ಲಿ ಗೀತೆಯ ಸ್ಥಾನ, ಕರ್ಮಯೋಗದ ತಿರುಳು, ಸನ್ಯಾಸವೂ- ಯೋಗವು, ಪರಮಾತ್ಮನ ವಿಭೂತಿಗಳು, ಸಂಸಾರವು ಸೆರೆಮನೆಯಲ್ಲ; ಸಾಧನ ಕ್ಷೇತ್ರ ಹೀಗೆ ವಿಷಯಗಳನ್ನು ವಿನೂತನ ದೃಷ್ಟಿಯಲ್ಲಿ ಚಿಂತನೆ ನಡೆಸಿದ್ದೇ ಈ ಕೃತಿಯ ಹೆಗ್ಗಳಿಕೆ ಎಂದು ಲೇಖಕರು ಹೇಳಿದ್ದಾರೆ.

About the Author

ಆಲೂರು ವೆಂಕಟರಾಯ
(12 July 1880 - 25 February 1964)

‘ಕರ್ನಾಟಕದ ಕುಲಪುರೋಹಿತ’ ಎನಿಸಿದ ಆಲೂರು ವೆಂಕಟರಾಯರು ಕನ್ನಡ -ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವರು. ಧಾರವಾಡದಲ್ಲಿ 1880ರ ಜುಲೈ 12ರಂದು ಜನಿಸಿದ ವೆಂಕಟರಾಯರ ತಂದೆ ಭೀಮರಾಯ, ತಾಯಿ ಭಾಗೀರಥಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. (1903, ಎಲ್ಎಲ್ ಬಿ (1905) ಪದವಿ ಪಡೆದರು. ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಆಲೂರು ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದಕ್ಕಾಗಿ ವಕೀಲಿವೃತ್ತಿ ಕೈ ಬಿಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ...

READ MORE

Related Books