ಶೈವ ಸುಧಾರ್ಣವ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 474

₹ 3.00




Year of Publication: 1923
Published by: ಗಳಗನಾಥ ಸುರಸ ಗ್ರಂಥಮಾಲಾ
Address: ಧಾರವಾಡ

Synopsys

ಗಳಗನಾಥರು ಹಾಗೂ ಮಲ್ಲಾರಿ ದೀಕ್ಷಿತ ಚಿಂತಾಮಣಿ ದೀಕ್ಷಿತ ಕಕ್ಕನವರ ಜಂಟಿಯಾಗಿ ಬರೆದ ಕೃತಿ-ಸಚಿತ್ರ ಶೈವ ಸುಧಾರ್ಣವ. ಪುರಾಣಗಳನ್ನು ಯಾವ ರೀತಿಯಾಗಿ ಅವಲೋಕಿಸಬೇಕು ಎಂಬುದರ ದಿಗ್ದರ್ಶನ ನೀಡುವ ಮಹತ್ವದ ಕೃತಿ ಇದು. ವಿಷಯ ಪ್ರಸ್ತಾವನೆಗೆ ಒಟ್ಟು ಮೂರು ವಿಭಾಗಗಳನ್ನಾಗಿಸಿದೆ. ಮೊದಲನೆಯದು; ಶಿವ ಚರಿತ್ರ ಕಥನ (ದಕ್ಷ ಯಜ್ಞ ಧ್ವಂಸ, ಗಿರಿಜಾ ಕಲ್ಯಾಣ, ಶಬರಿ ಶಂಕರ ಲೀಲೆ, ಮಾರ್ಕಂಡೆಯ ಚರಿತ್ರೆ, ಲಿಂಗೋದ್ಭವ ಲೀಲೆ ಇತ್ಯಾದಿ) ಎರಡನೆಯದ್ದು; ಜ್ಞಾನ ಪ್ರದೀಪ (ಈಶ್ವರ ಮತ್ತು ಮಾಯೆಯ ಸಂಬಂಧ, ಮಾಯೆಯ ವ್ಯಕ್ತ ಮತ್ತು ಅವ್ಯಕ್ತ ರೂಪಗಳು, ಲಿಂಗಪೂಜೆ, ಭಕ್ತಿಯೋಗ ಇತ್ಯಾದಿ) ಮೂರನೇಯದ್ದು; ಶಿವಸ್ತುತಿಗಳು (ಶೈವ ಕವಚಂ, ಲಿಂಗಾಷ್ಟಕಂ, ಶಿವರಕ್ಷಾಸ್ತ್ರೋತ್ರಂ ಇತ್ಯಾದಿ) ಹೀಗೆ ವಿಷಯವನ್ನು ಸವಿಸ್ತಾರವಾಗಿ ಚರ್ಚಿಸಿದ್ದು, ವಿದ್ವತ್ ಪೂರ್ಣ ಗ್ರಂಥ ಇದಾಗಿದೆ.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books