ಮೊದಲ ಹಾಗೂ ಕೊನೆಯ ಬಿಡುಗಡೆ

Author : ಜಿಡ್ಡು ಕೃಷ್ಣಮೂರ್ತಿ

Pages 348

₹ 180.00




Year of Publication: 2013
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 080 2244 3996

Synopsys

ಭಾರತೀಯ ತತ್ವಜ್ಞಾನಿ ಖ್ಯಾತಿಯ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ -ಮೊದಲ ಹಾಗೂ ಕೊನೆಯ ಬಿಡುಗಡೆ. ಜೀವನದ ಗಂಭೀರತೆಯನ್ನು ಸರಳೀಕರಿಸಿ ನೋಡುವ, ವಿಶ್ಲೇಷಿಸುವ ಪ್ರಯತ್ನಗಳು ಈ ಮೊದಲಿನಿಂದಲೂ ನಡೆಯುತ್ತಿವೆ. ಆದರೆ, ಅವು ಕೆಲವೊಮ್ಮೆ ಸರಿಯಾಗಿ ಕೆಲವೊಮ್ಮೆ ತಪ್ಪಾಗಿ ಹೀಗೆ ದ್ಬಂದ್ವಗಳ ಮೊತ್ತವಾಗಿವೆ. ಪುರಾಣಗಳು ಸೇರಿದಂತೆ ಪ್ರಾಚೀನ ಗ್ರಂಥಗಳು ಬದುಕಿನ ಅಂತಿಮ ಉದ್ದೇಶವನ್ನು ಮೋಕ್ಷ ಪಡೆಯುವುದೇ ಆಗಿದೆ ಎಂದು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ಎಂಬ ಪದವು ಲೌಕಿಕತೆಯನ್ನೂ ಮೀರುತ್ತದೆ. ಅದು ಅಲೌಕಿಕತೆಯಲ್ಲಿ ಅರ್ಥವನ್ನು ಪಡೆದು ಬದುಕಿನ ಗಂಭೀರತೆಯನ್ನು ತಿಳಿಸುತ್ತದೆ. ಇಂತಹ ಚಿಂತನೆಗಳ ಮೊತ್ತವಾಗಿ ಈ ಕೃತಿ.

About the Author

ಜಿಡ್ಡು ಕೃಷ್ಣಮೂರ್ತಿ
(11 May 1895)

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ...

READ MORE

Related Books