ಸಾಕ್ರೆಟೀಸನ ಕೊನೆಯ ದಿನಗಳು

Author : ಎ.ಎನ್. ಮೂರ್ತಿರಾವ್

Pages 234

₹ 140.00




Year of Publication: 2010
Published by: ಡಿ.ವಿ.ಕೆ. ಮೂರ್ತಿ

Synopsys

ತಾತ್ವಿಕರಲ್ಲಿ ಸಾಕ್ರೆಟಿಸ್ ನ ಹೆಸರು ಬಹಳ ದೊಡ್ಡದು. ಪಾಶ್ಚಿಮಾತ್ಯ ಚಿಂತನಾಲೋಕವನ್ನು ತನ್ನ ವಿಚಾರಗಳಿಂದ ಪ್ರಭಾವಿಸಿದವನು ಸಾಕ್ರೆಟಿಸ್. ಪುಸ್ತಕದ ಶೀರ್ಷಿಕೆಯೇ ಸೂಚಿಸುವಂತೆ ಗ್ರೀಕ್ ತತ್ವಜ್ಞಾನಿ ಸಾಕ್ರೆಟಿಸ್ ನ ಕೊನೆಯ ದಿನಗಳನ್ನು ಕುರಿತಾದ ಪುಸ್ತಕವಿದು. ಸಾಕ್ರಟಿಸ್ ನ ಕೊನೆಯ ದಿನಗಳಲ್ಲಿ ತನ್ನ ಸಹಚರರೊಂದಿಗೆ ನಡೆಸಿದ ಚರ್ಚೆ, ಮಾತು, ಸತ್ಯದ ಹುಡುಕಾಟ ಈ ಪುಸ್ತಕದಲ್ಲಿದೆ. ಸಾಕ್ರಟಿಸ್ ನ ವಿಚಾರಗಳನ್ನು ಪ್ಲೇಟೋ ಅಕ್ಷರಕ್ಕೆ ಇಳಿಸಿದ್ದಾನೆ. ಅದನ್ನು ಒಳಗೊಂಡ ಅಪರೂಪದ ಹಾಗೂ ಅಷ್ಟೇ ಮಹತ್ವದ ಪುಸ್ತಕವಿದು. ಸತ್ಯದ ಹುಡುಕಾಟ, ಪ್ರಶ್ನೆ ಕೇಳುವ, ಚರ್ಚೆಯ ಮೂಲಕವೇ ಸತ್ಯದ ಹುಡುಕಾಟ ಮಾಡಬಯಸುವ ಸಾಕ್ರೆಟಿಸ್ ತನ್ನ ವಿಚಾರಗಳಿಂದಾಗಿ ಪ್ರಭುತ್ವಕ್ಕೆ ಸವಾಲಾಗಿದ್ದವನು. ಪ್ರಶ್ನೆ ಕೇಳುವುದನ್ನು ಕಲಿಸುತ್ತಿದ್ದವನನ್ನೇ ಮಟ್ಟ ಹಾಕಲು ಪ್ರಭುತ್ವ ನಿರ್ಧರಿಸಿ ಯುವಜನಾಂಗದ ದಿಕ್ಕು ತಪ್ಪಿಸುತ್ತಿದ್ದಾನೆ ಎಂಬ ಆರೋಪ ಹೊರಿಸಿ ವಿಚಾರಣೆ ನಡೆಸಲಾಯಿತು. ವಿಚಾರಣೆಗೆ ಎದುರಾದ ಸಾಕ್ರೆಟಿಸ್ ತಾನು ಮಾಡುತ್ತಿರುವ ಕುರಿತು ಪಶ್ಚಾತ್ತಾಪ ಕೂಡ ವ್ಯಕ್ತಪಡಿಸಲಿಲ್ಲ. ಬಹುಮತದ ಆಧಾರದ ಮೇಲೆ ಸಾಕ್ರೆಟಿಸ್ ನಿಗೆ ಮರಣದಂಡನೆ ವಿಧಿಸಲಾಗುತ್ತದೆ. ಕೊನೆಯ ದಿನಗಳಲ್ಲಿ ಸೆರೆವಾಸದಲ್ಲಿ ಕಳೆಯುವ ಸಾಕ್ರೆಟಿಸ್ ಸತ್ಯದ ಹುಡುಕಾಟದ ದಾರಿಯಲ್ಲಿ ಎದುರಾಗುವ ಸವಾಲುಗಳಿಗೆ ಸಾಕ್ಷಿಯಾಗುತ್ತಾನೆ. ಸತ್ಯದ ಶೋಧನೆಯೇ ಅರಾಜಕತೆಯಂತೆ ಭಾಸವಾಗುತ್ತದೆ. ಸಾಕ್ರೆಟಿಸ್ ಹೆಮ್ಲಾಕ್ ವಿಷ ಕುಡಿಯುವುದರೊಂದಿಗೆ ತನ್ನ ಬದುಕಿಗೆ ಅಂತ್ಯ ಹಾಡುತ್ತಾನೆ. 

About the Author

ಎ.ಎನ್. ಮೂರ್ತಿರಾವ್
(18 June 1900 - 23 August 2003)

ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್  ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು. ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ...

READ MORE

Related Books