ಉಪನಿಷತ್ ದರ್ಶನ

Author : ಶಿಕಾರಿಪುರ ಈಶ್ವರ ಭಟ್

Pages 124

₹ 100.00




Year of Publication: 2021
Published by: ಶ್ರೀ ನಂದಿಕೇಶ್ವರ ಪ್ರಕಾಶನ
Address: ಕೊಡಂಗಲ್ಲು, ಮೂಡಬಿದಿರೆ, ದ.ಕ- 574 197

Synopsys

ಲೇಖಕ ಶಿಕಾರಿಪುರ ಈಶ್ವರ ಭಟ್ ಅವರ ಕೃತಿ ಉಪನಿಷತ್ ದರ್ಶನ. ಕೃತಿಯಲ್ಲಿ ಪ್ರದರ್ಶನ ಖಾಂಡ, ನಿದರ್ಶನ ಕಾಂಡ ಹಾಗೂ ಸುದರ್ಶನ ಕಾಂಡ ಎಂಬ ಮೂರು ವಿಭಾಗಗಳಿವೆ. ಉಪನಿಷತ್ತುಗಳ ಸುತ್ತ-ಮುತ್ತ, ದಶೋಪನಿಷತ್ತುಗಳ ಸಂಕ್ಷಪ್ತ ಪರಿಚಯ, ಉಪನಿಷತ್ತುಗಳ ಪ್ರಸ್ತುತತೆ, ಉಪನಿಷತ್ತುಗಳ ವೈಶ್ವಿತ ಪ್ರಭಾವ, ಆತ್ಮಸಾಕ್ಷಾತ್ಕಾರದ ಪಂಚ ಸೋಪಾನಗಳು ಸೇರಿದಂತೆ 10 ಶಿರ್ಷ್‌ಕೆಗಳ ಬರಹಗಳು ನಿದರ್ಶನ ಕಾಂಡದಲ್ಲಿವೆ. ಸುದರ್ಶನ ಕಾಂಡದಲ್ಲಿ ಪರಬ್ರಹ್ಮ ಜ್ಞಾನ-ಸತ್ಯದರ್ಶನ, ವಸ್ತು ಪರೀಕ್ಷಣ ವಿಧಾನ, ನಮ್ಮ ನಡೆ ಗುರಿಯ ಕಡೆಗೆ, ಉಪನಿಷತ್ ದರ್ಶನ: ನಾನು ಕಂಡಂತೆ ಹೀಗೆ 12 ಶೀರ್ಷಿಕೆಗಳು ಇವೆ. ನಿ.ಬೀ.ವಿಜಯ ಬಲ್ಲಾಲ್ ಅವರ ಒಳ್ನುಡಿ ಹಾಗೂ ಸೋಂದಾ ಭಾಸ್ಕರ್ ಭಟ್ ಅವರ ಬೆನ್ನುಡಿ ಈ ಕೃತಿಯಲ್ಲಿದೆ.

About the Author

ಶಿಕಾರಿಪುರ ಈಶ್ವರ ಭಟ್

ಶಿಕಾರಿಪುರ ಈಶ್ವರ ಭಟ್ಟರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಪತ್ರಕರ್ತರು ಮತ್ತು ಲೇಖಕ, ಸಂಘಟಕ ಕಾರ್ಯಕರ್ತರು. ಸುಮಾರು ಮೂವತ್ತು ವರ್ಷಗಳ ಕಾಲ ಶಿಕಾರಿಪುರ, ಉಡುಪಿ, ಉದ್ಯಾವರ ಮತ್ತು ಮೂಡುಬಿದಿರೆ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, 2021ರಲ್ಲಿ ನಿವೃತ್ತರಾದವರು. ಶಿಕಾರಿಪುರದ "ಸರ್ವಜ" ಮತ್ತು ಮಂಗಳೂರಿನ "ಹೊಸದಿಗಂತ ಪತ್ರಿಕೆಗಳಲ್ಲಿ ಹವ್ಯಾಸಿ ಪತ್ರಕರ್ತನ ನೆಲೆಯಲ್ಲಿ ದಶಕದ ಸೇವೆ ಸಲ್ಲಿಸಿರುವ ಶಿಕಾರಿಪುರ ಈಶ್ವರಭಟ್ಟರು ಇದುವರೆಗೆ ನೂರಾರು ಲೇಖನ ಸಂದರ್ಶನಗಳನ್ನು ಮಾಡಿದ್ದು, ಅವು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉಡುಪಿಯಲ್ಲಿ ಜರುಗಿದ ವಿರಾಟ್ ಹಿಂದೂ ಸಮಾಜೋತ್ಸವದ ಸವಿನೆನಪಿಗಾಗಿ ಹೊರತಂದ “ಅಮೃತ ಸಿಂಧು" ...

READ MORE

Related Books