ಪ್ರಜ್ಞಾ ಪಾರಮಿತ ಹೃದಯ ಸೂತ್ರ

Author : ಎಸ್. ನಟರಾಜ ಬೂದಾಳು

Pages 30

₹ 30.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್ ವಯಾ ಎಮ್ಮಿಗನೂರು ಜಿಲ್ಲೆ ಬಳ್ಳಾರಿ- 583113
Phone: 9480353507

Synopsys

ಬೌದ್ಧ ತಾತ್ವಿಕತೆಯ ಮುಖ್ಯ ಪರಿಕಲ್ಪನೆಗಳನ್ನು ಸರಳವಾಗಿ ಪರಿಚಯಿಸುವ ಸರಣಿ ಕೃತಿಗಳಲ್ಲಿ ಪ್ರಜ್ಞಾಪಾರಮಿತ ಹೃದಯಸೂತ್ರವೂ ಒಂದು. ಬೌದ್ಧ ಆವರಣದ ಬೃಹತ್ ಗ್ರಂಥಗಳನ್ನು ಓದಬಯಸುವವರು ಓದಲಿ; ಆದರೆ ಅಂತಹ ಗ್ರಂಥಗಳನ್ನು ಎಲ್ಲ ಆಸಕ್ತರೂ ಓದುವುದು ಕಷ್ಟಸಾಧ್ಯ. ಬುದ್ಧಗುರು ಲೋಕಕ್ಕೆ ನೀಡಿದ ಅರಿವು ಎಲ್ಲರಿಗೂ ದೊರಕಲಿ ಎಂಬ ಉದ್ದೇಶದಿಂದ ಲೇಖಕರಾದ ಎಸ್ ನಟರಾಜ ಬೂದಾಳು ಅವರು ಬೌದ್ಧ ಧರ್ಮದ ಪ್ರಮುಖ ನಿಲುವುಗಳನ್ನು ವಿವರಿಸುವ ಸರಣಿ ಕೃತಿಗಳಲ್ಲಿ ಇದು ಎರಡನೆಯದು. ಬುದ್ಧನ ತತ್ವಗಳನ್ನು ಸೂತ್ರ ರೂಪದಲ್ಲಿ ದಾಖಲಿಸಿಡಲಾಗಿದೆ. ಹಲವು ಸ್ತರಗಳಲ್ಲಿ ಅವುಗಳನ್ನು ವ್ಯಾಖ್ಯಾನಿಸಿಲಾಗಿದೆ. ಗಂಭೀರವೂ ಆಳವೂ ಆದ ಬೌದ್ಧತಾತ್ವಿಕತೆಯ ಸರಳ ನಿರೂಪಣೆಯ ಜೊತೆಗೆ ಸೂತ್ರಗಳ ಕನ್ನಡಾನುವಾದವನ್ನು ನೀಡುವುದು ಲೇಖಕರ ಉದ್ದೇಶವಾಗಿದೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books