ಶ್ರೀ ನಿರ್ಯಾಣ ಮಹೋತ್ಸವ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 153

₹ 1.00




Year of Publication: 1915
Published by: ವೆಂಕಟೇಶ ತಿರಕೋ ಕುಲಕರಣಿ
Address: ಗಳಗನಾಥ ಸುರಸ ಗ್ರಂಥಮಾಲಾ, ಹಾವೇರಿ

Synopsys

ಶ್ರೀ ನಿರ್ಯಾಣ ಮಹೋತ್ಸವ-ಕೃತಿಯನ್ನು ಗಳಗನಾಥರು ಬರೆದಿದ್ದು, ಶ್ರೀ ಶೇಷಚಲ ಸದ್ಗುರೂತ್ತಮರನ್ನು ಕುರಿತದ್ದು. ಶ್ರೀಗುರುವು ಲೋಕದ ಪಾಪವನ್ನು ತಾನು ಭೋಗಿಸಿದ್ದು, ಸದ್ಗುರುವಿನ ಲೋಕಾನುವರ್ತನ, ಸದ್ಗುರುವಿನ ಕಲಿಕಾಲ ನಿರೀಕ್ಷಣಾ, ಶ್ರೀ ಗುರುವಿನ ಶರಣ್ಯ ಪ್ರದರ್ಶನ, ಶ್ರೀಗುರುವಿನ ನಿರ್ಯಾಣ ಹೀಗೆ ವಿವಿಧ ಅಲೌಕಿಕ ತತ್ವವನ್ನು ತಿಳಿಸುವ ಅಧ್ಯಾಯಗಳು ಈ ಕೃತಿಯ ಹೆಗ್ಗಳಿಕೆಯಾಗಿದೆ. ಹಾವೇರಿಯ ಅಗಡಿಯ ಆನಂದ ಮಠದ ಸೇವೆಯ ಕುರಿತೂ ಇಲ್ಲಿ ವಿವರ ಲಭ್ಯವಿದೆ. 

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books