ಯೋಗ ಪ್ರಕಾಶಿಕೆ

Author : ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ

Pages 472

₹ 300.00




Published by: ಶ್ರೀ ಭಗವತ್ಪಾದ ಪ್ರಕಾಶನ
Address: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಅಂಚೆ: ಮಠದೇವಳ, ತಾಲೂಕು ಶಿರಸಿ-580336

Synopsys

ಶ್ರೀಮದ್ ಜಗದ್ಗುರು ಶಂಕರಾಚಾರ್ಯ-ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ರಚಿಸಿದ ಕೃತಿ-ಯೋಗ ಪ್ರಕಾಶಿಕೆ. ಪತಂಜಲಿ ಯೋಗಸೂತ್ರಗಳ ಕನ್ನಡ ವ್ಯಾಖ್ಯಾನ ಎಂಬ ಉಪಶೀರ್ಷಿಕೆಯಡಿ ಯೋಗಶಾಸ್ತ್ರದ ಸ್ವರೂಪ-ಮಹತ್ವವನ್ನು ತಿಳಿಸುವ ಉದ್ದೇಶ ಇಲ್ಲಿದೆ. ಯೋಗಶಾಸ್ತ್ರವು, ಭಾರತೀಯ ಪ್ರಾಚೀನ ಪರಂಪರಾಗತವಾಗಿ ಬಂದ ಅಧ್ಯಯನ ಶಾಸ್ತ್ರವಾಗಿದೆ. ಇದು ಮನಸ್ಸಿನ ಸ್ವರೂಪದ ಚಿಂತನ ಹಾಗೂ ನಿಗ್ರಹದ ಸಾಧನವಾಗಿದೆ. ಯೋಗಶಾಸ್ತ್ರವು ವೇದ-ಉಪನಿಷತ್ತುಗಳನ್ನು ಒಳಗೊಂಡಿವೆ. ನಾಥ ಪಂಥ, ಸೂಫಿ ಪಂಥ, ಬೌದ್ಧ, ಜೈನ ಹೀಗೆ ಪ್ರಾಚೀನ ಧರ್ಮ ಗ್ರಂಥಗಳಲ್ಲೂ ಯೋಗಶಾಸ್ತ್ರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ. ಯೋಗಶಾಸ್ತ್ರದ ತಾರ್ಕಿಕತೆ, ವೈಜ್ಞಾನಿಕತೆ, ಚಿಂತನಶೀಲ ಅಂಶಗಳನ್ನು ಪತಂಜಲಿ ಮಹರ್ಷಿಯು ದೀರ್ಘವಾಗಿ ಚಿಂತನೆ ನಡೆಸಿದ್ದನ್ನು ಕಾಣಬಹುದು. ಚಂಚಲ ಮನಸ್ಸನ್ನು ಒಂದೆಡೆ ನಿಲ್ಲಿಸುವುದು, ಆ ಮೂಲಕ ಏಕಾಗ್ರತೆ ಸಾಧಿಸುವುದು ಯೋಗದ ಉದ್ದೇಶ. ಇದರ ಸೂತ್ರಗಳನ್ನು, ಮಹತ್ವಗಳನ್ನು ಪ್ರಾಚೀನ ಕಾಲದಿಂದಲೂ ಸಮರ್ಥಿಸಿಕೊಳ್ಳುತ್ತಾ ಬಂದಿದ್ದರ ಕುರಿತು ಅಧ್ಯಯನ ಪೂರ್ಣ ವಿವರಗಳಿರುವ ಕೃತಿ ಇದು.

About the Author

ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ

ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೂಜ್ಯರು. ಜನಸಾಮಾನ್ಯರಲ್ಲಿ ಕಲೆ-ಸಂಸ್ಕೃತಿ ಕುರಿತು ಅರಿವು ಮೂಡಿಸಲು ಅವರು ಶ್ರೀಸರ್ವಜ್ಞಾನೇಂದ್ರ ಸರಸ್ವತೀ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಅರಣ್ಯದ ಹಸಿರು ಉಳಿಸುವಲ್ಲಿಯೂ ಅವರು ಹೋರಾಟಗಳನ್ನುನಡೆಸಿ, ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ವೇದ-ವೇದಾಂತ ಹಾಗೂ ವಿಜ್ಞಾನ ವಿಷಯಗಳ ಸಂಶೋಧನೆಗಾಗಿ ಅವರು ಬ್ರಹ್ಮ ವಿದ್ಯಾ ಸಂಸ್ಥಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಶ್ರೀಗಳ ನೇತೃತ್ವದಲ್ಲೇ ಮಹಾಸಂಸ್ಥಾನದಿಂದ ‘ಸ್ವರ್ಣವಲ್ಲೀ ಪ್ರಭಾ’ ಎಂಬ ಪತ್ರಿಕೆಯು ಪ್ರಕಟವಾಗುತ್ತಿದೆ. ಕೃತಿಗಳು: ಯೋಗ ಪ್ರಕಾಶಿಕೆ ...

READ MORE

Related Books