ಶೂದ್ರ ದಾರ್ಶನಿಕರು

Author : ಪೂರೀಗಾಲಿ ಮರಡೇಶಮೂರ್ತಿ

Pages 74

₹ 32.00




Year of Publication: 2002
Published by: ಲಿಖಿತ ಸ್ವರೂಪ್ ಪಬ್ಲಿಕೇಶನ್ಸ್
Address: ನಂ.06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೇಕ್ಸ್, ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು-570004
Phone: 9449526390

Synopsys

ಶೂದ್ರ ದಾರ್ಶನಿಕರು-ಕೃತಿಯಲ್ಲಿ ನಾಲ್ಕು ಭಾಗಗಳಿದ್ದು ಮೊದಲ ಭಾಗದಲ್ಲಿ ಬುದ್ಧ, ಬಸವ, ಮಹಾವೀರ, ಯೇಸು, ಪೈಗಂಬರ್, ಅಕ್ಕ, ಕನಕ, ಪುರಂದರ, ಗಾಂಧಿ, ಅಂಬೇಡ್ಕರ್- ಅವರೆಲ್ಲರ ಜೀವನ ಬೋಧನೆ, ಹೋರಾಟಗಳನ್ನು ತೆರೆದಿಡುವ ಹಂಬಲ ಈ ಕೃತಿಯದ್ದು. ಮುಂದೊಂದು ದಿನ ಶೂದ್ರ ಚಿಂತನೆಗಳೇ ಸಮಾಜದಲ್ಲಿ ಸಮನಾಗಿ ನಿಲ್ಲುತ್ತದೆ : ನಿಲ್ಲಬೇಕೆಂಬ ಆಶಯವೂ ಇದರೊಳಗಿದೆ. ಸರ್ವಸಮಾನತಾವಾದ, ಜಾತ್ಯತೀತವಾದ, ಸ್ತ್ರೀಹಕ್ಕುಗಳು, ಅಹಿಂಸಾತತ್ವ, ಸರಳ ಜೀವನ, ವಿಶ್ವಕಲ್ಯಾಣ, ಮಾನವೀಯತೆ, ಮೂಢನಂಬಿಕೆ ನಿರ್ಮೂಲನೆ ಇಲ್ಲಿ ಒರೆಗೆ ಹಚ್ಚಲಾಗಿದೆ. ಭಾಗ -2ರಲ್ಲಿ ವರ್ಣ ವ್ಯವಸ್ಥೆ ಮತ್ತು ದಾರ್ಶನಿಕರು, ವರ್ಣ ವ್ಯವಸ್ಥೆ ವಿರುದ್ಧ ಸ್ತ್ರೀ ಚಳವಳಿಯನ್ನು ತೆರೆದಿಡಲಾಗಿದೆ. ಭಾಗ-3 ರಲ್ಲಿ ಕಲ್ಯಾಣ ಕ್ರಾಂತಿಯ ಕಿಡಿ, ಶತಶತಮಾನಗಳ ಅಲೆ ಗೌತಮ ಬುದ್ಧರು, ದಾರ್ಶನಿಕ ಜ್ಯೋತಿ ಮಹಾವೀರರು, ಯೇಸು ಎಂಬ ಮಹಾ ಬೆಳಕು, ಮನುಕುಲದ ಮಹಾ ಮಾನವತಾವಾದಿ ಪೈಗಂಬರ್, ಸ್ವಾತಂತ್ರ್ಯದ ಯುಗಪುರುಷ ಗಾಂಧೀಜಿ, ಸಮಾನತೆಯ ಹರಿಕಾರ ಅಂಬೇಡ್ಕರ್ ಕುರಿತಂತೆ ವ್ಯಾಖ್ಯಾನಿಸಲಾಗಿದೆ. ಭಾಗ -4ರಲ್ಲಿ ಶೂದ್ರ ದಾರ್ಶನಿಕರು ಮತ್ತು ಪ್ರಸ್ತುತತೆ, ಪರಿಹಾರೋಪಾಯಗಳು ಕುರಿತಂತೆ ಹೇಳಲಾಗಿದೆ. ಒಟ್ಟು ಶೂದ್ರ ದಾರ್ಶನಿಕರು-ಈ ಕೃತಿಯು  ಸಮಾನತೆಯ ಬಾಗಿಲು ತೆರೆಯುವಲ್ಲಿ ದಾರಿದೀಪವಾಗಲಿದೆ.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books