ತತ್ವಪದದೊಳಗಿನ ತಿಳಿವು

Author : ಮೀನಾಕ್ಷಿ ಬಾಳಿ

Pages 152

₹ 150.00




Year of Publication: 2021
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಗುಲಬರ್ಗಾ ವಿಶ್ವವಿದ್ಯಾಲಯ ರಸ್ತೆ, ಕಲಬುರಗಿ

Synopsys

ಹಿರಿಯ ಲೇಖಕಿ ಡಾ.ಮೀನಾಕ್ಷಿ ಬಾಳಿ ಅವರ ಕೃತಿ-ತತ್ವಪದದೊಳಗಿನ ತಿಳಿವು. ತತ್ವಪದಗಳನ್ನು ಗಂಭೀರವಾಗಿ ಅಧ್ಯಯನ ಮಾಡಿರುವ ಕೃತಿ. ತತ್ವಪದಗಳ ರಾಚನಿಕ ಅಧ್ಯಯನ, ಅದರ ಅನುಭವ ಅಧ್ಯಯನ, ತಾತ್ವಿಕ ಅಧ್ಯಯನ,ಮೂರು ನೆಲೆಗಳಲ್ಲೂ ಇಲ್ಲಿನ ಬರವಣಿಗೆ ಇದೆ. ತತ್ವಪದ ಸಾಹಿತ್ಯದ ಸಂಬಂಧಿಸಿದಂತೆ 9 ಲೇಖನಗಳಿದ್ದು, ಬೌದ್ಧ ತತ್ವ ಸ್ಪರ್ಶದಲ್ಲಿ ತತ್ವಗಳು, ಬಬಲಾದಿ ಚಿಕ್ಕಯ್ಯನವರ ಅನುಭಾವ ಸಾಹಿತ್ಯ, ಮಹಿಳಾ ತತ್ವಪದಕಾರರು ಸಾಮಾಜಿಕ ಆಯಾಮಗಳು,ತತ್ವಪದಗಳಲ್ಲಿ ಸಾಮರಸ್ಯ ಭಾರತ, ತತ್ವಪದ ದೊಳಗಿನ ತಿಳಿವು ಬರಹಗಳು ಓದುಗರ ಗಮನವನ್ನು ಸೆಳೆಯುತ್ತವೆ. ತತ್ವಪದಗಳ-ಹೊರನೋಟಕ್ಕೆ ಸ್ಫುರಿಸುವ ಹಾಗೂ ಆಂತರ್ಯದಲ್ಲಿ ಸ್ಫುರಿಸುವ ಅರ್ಥಗಳನ್ನು ವಿಶ್ಲೇಷಿಸಿದ್ದು, ತತ್ವಪದಗಳ ಆಂತರಿಕ ಸೌಂದರ್ಯವನ್ನು ಇಲ್ಲಿಯ ಬರಹಗಳ ಮೂಲಕ ತೋರಿದ ಕೃತಿ ಇದು.

About the Author

ಮೀನಾಕ್ಷಿ ಬಾಳಿ
(22 June 1962)

ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ.    ...

READ MORE

Related Books