‘ಕನ್ನಡ ಸಾಹಿತ್ಯ ಚರಿತ್ರೆ’ಯ ಮುಂದುವರಿಕೆ

Author : ಶ್ರೀನಿವಾಸ ಹಾವನೂರ

Pages 179

₹ 60.00




Year of Publication: 2006
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರೋಡ್, ಚಾಮರಾಜ ಪೇಟೆ ಬೆಂಗಳೂರು- 560018

Synopsys

‘ಕನ್ನಡ ಸಾಹಿತ್ಯ ಚರಿತ್ರೆ’ಯ ಮುಂದುವರಿಕೆ ಕೃತಿಯು ಶ್ರೀನಿವಾಸ ಹಾವನೂರ ಸಂಪಾದಕತ್ವದ ಕನ್ನಡ ನವೋದಯದ ಕಾಲದ ಪ್ರಸಿದ್ದ ವ್ಯಕ್ತಿ, ವಿಚಾರಗಳ ಕುರಿತ ಬರವಣಿಗೆಯಾಗಿದೆ. ಹಿರಿಯ ವಿದ್ವಾಂಸ ಡಾ. ರಂ. ಶ್ರೀ. ಮುಗಳಿ ಅವರು ಕನ್ನಡ ಸಾಹಿತ್ಯದ ಚರಿತ್ರೆಯನ್ನು ಬರೆದಿದ್ದು, ಅದರ ಮುಂದುವರಿದ ವಿಚಾರಗಳ ಸಂಗ್ರಹವಾಗಿ ಈ ಕೃತಿ ಮೂಡಿಬಂದಿದೆ.

ಈ ಕೃತಿಯು ಇತಿಹಾಸದ ಪ್ರಸಿದ್ದ ವ್ಯಕ್ತಿಗಳನ್ನು ವಿವರಿಸುತ್ತಾ ಅವರ ಸಾಹಸ ಹಾಗೂ ಬದುಕಿನ ನೋಟವನ್ನು ಪ್ರಸ್ತುತಪಡಿಸುತ್ತದೆ. ಇಲ್ಲಿ ಲೇಖಕ, ರಾಘವಾಂಕನಲ್ಲಿದ್ದ ನಾಟ್ಯ ಪ್ರತಿಭೆಯನ್ನು ವಿಶ್ಲೇಷಿಸುತ್ತಾರೆ. ಈ ಕೃತಿಯು 16 ಅಧ್ಯಾಯಗಳಾದ ಹಳಗನ್ನಡ ಕಾವ್ಯ ನೋಟ, 1ನೆಯ ಗುಣವರ್ಮನ ‘ಶೂದ್ರಕ’, ನಯಸೇನನ ಧರ್ಮಾವೃತ, ರಾಘವಾಂಕನ ನಾಟ್ಯ ಪ್ರತಿಭೆ, ಅಂಡಯ್ಯನ ‘ಕಬ್ಬಿಗರ’ ಕಾವ್ಯ, ನಾಗರಾಜನ ಪುಣ್ಯಸ್ರಾವ, ಮಹಾದೇವಿಯಕ್ಕನ ಸಾಂಗತ್ಯ, ವಿಶ್ವಸಾಹಿತ್ಯಕ್ಕೆ ವಚನ ಸಾಹಿತ್ಯದ ಕಾಣಿಕೆ, ಕುಮಾರವ್ಯಾಸ ಭಾರತದ ಹಿರಿಮೆ, ಷಡಕ್ಷರದೇವನಳ್ಳಿ ವಾತ್ಸಲ್ಯ ರಸ, ಕನಕದಾಸರು(ವ್ಯಕ್ತಿ ವಾಙ್ಞಯ ಮತ್ತು ಜೀವನ ಸಂದೇಶ), ಸರ್ವಜ್ಞನ ಕೊಡುಗೆ, ತಿರುಮಲ್ಯಾರ ಮತ್ತು ಚಿಕದೇವರಾಯ ವಂಶಾವಳಿ, ಹೊನ್ನಮ್ಮನ ಹದಿಬದೆಯ ಧರ್ಮ(ಕೆಲವು ಸಂದೇಶಗಳು), ಬಸವಪ್ಪಶಾಸ್ತ್ರಿಗಳ ಕಾವ್ಯಪ್ರತಿಭೆ, ಮುದ್ಧಣ ಕವಿಯ ‘ರಾಮಾಶ್ವಮೇಧ’ ಇವೆಲ್ಲವನ್ನು ಒಳಗೊಂಡಿದೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books