ಹಲಸಂಗಿ ಸಾಹಿತ್ಯದ ದೇಸಿಯತೆ

Author : ಪ್ರಕಾಶ ಗ. ಖಾಡೆ



Year of Publication: 2022
Published by: ಬೆರಗು ಪ್ರಕಾಶನ
Address: ಕಡಣಿ, ಆಲಮೇಲ ತಾಲೂಕು, ವಿಜಯಪುರ- 562135

Synopsys

ಲೇಖಕ ಡಾ. ಪ್ರಕಾಶ ಗ. ಖಾಡೆ ಅವರ ಸಾಹಿತ್ಯ ಕೃತಿ ʻಹಲಸಂಗಿ ಸಾಹಿತ್ಯದ ದೇಸಿಯತೆʼ. ಪುಸ್ತಕದ ಬೆನ್ನುಡಿಯಲ್ಲಿ ಪುರುಷೋತ್ತಮ ಗಲಗಲಿ ಅವರು, “ಹಿಂದೆೆ ಡಾ.ಜಿ. ಎಸ್. ಶಿವರುದ್ರಪ್ಪನವರು 'ಹಲಸಂಗಿ ನವೋದಯ ಸಾಹಿತ್ಯದ ನಾಲ್ಕನೆಯ ಕೇಂದ್ರ' ಎಂದು ಪರಿಗಣಿಸುವ ಅನಿವಾರ್ಯತೆಯನ್ನು ಕುರಿತು ತಮ್ಮ ಭಾಷಣದಲ್ಲಿ ಹೇಳಿದ್ದರು. ಅದನ್ನು ಹೇಳಿದವರಿಗೂ ಮನವರಿಕೆಯಾಗಿತ್ತು. ಆದರೆ ಅದನ್ನು ಲಿಖಿತದಲ್ಲಿ ಹೇಳಿ, ಸಮರ್ಥವಾದ ರೀತಿಯಲ್ಲಿ ನೀವು ಸಮರ್ಥನೆ ಮಾಡಿಕೊಂಡಿದ್ದೀರಿ. ಡಾ.ಗುರುಲಿಂಗ ಕಾಪಸೆ ಅವರ ನಂತರದ ತಲೆಮಾರಿನವರಲ್ಲಿ ಮಧುರಚೆನ್ನರ ಬಗ್ಗೆ ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ ತರ್ಕಬದ್ಧವಾದ ರೀತಿಯಲ್ಲಿ ನಿರೂಪಿಸಬಲ್ಲವರಲ್ಲಿ ನೀವು “at the top” ಎಂದು ಭಾವಿಸಿದ್ದೇನೆ” ಎಂದು ಹೇಳಿದ್ದಾರೆ.

About the Author

ಪ್ರಕಾಶ ಗ. ಖಾಡೆ
(10 June 1965)

ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...

READ MORE

Related Books