ತಗರ ಪವಾಡ

Author : ಎಂ.ಎಂ. ಕಲಬುರ್ಗಿ

Pages 180

₹ 60.00




Year of Publication: 2004
Published by: ವಿದ್ಯಾನಿಧಿ ಪ್ರಕಾಶನ
Address: ಸ್ಟೇಷನ್ ರಸ್ತೆ, ಗದಗ

Synopsys

ಸತ್ತ ಕುರಿಯನ್ನು ಬದುಕಿಸಿದ ಪವಾಡವನ್ನು ಹೇಳುವ ತಗರ ಪವಾಡ ಕುರುಬ ಸಮುದಾಯವನ್ನು ಪ್ರಸ್ತಾಪಿಸುವ ಮತ್ತೊಂದು ಕೃತಿ. ಈ ಪವಾಡದಿಂದಲೇ ಕಲ್ಯಾಣದಿಂದ ಹೊರಗಿದ್ದ ಕುರುಬರು ಒಳಗೆ ಬರುವಂತಾಯಿತು ಎನ್ನುವುದನ್ನು ಹೇಳುತ್ತದೆ.

ಸಿದ್ದಮಂಕ ಚರಿತೆಯೂ ಟಗರನ್ನು ಬದುಕಿಸಿದ ಬಳಿಕ ಕುರುಬನೊಬ್ಬ ಕಲ್ಯಾಣ ಪಟ್ಟಣದಲ್ಲಿ ವಾಸಿಸುವ ಅವಕಾಶ ಪಡೆದು ಕತೆ ಹೇಳುತ್ತದೆ. ಎರಡೂ ಕೃತಿಗಳಲ್ಲಿ ಬರುವ ನಾಯಕರ ಹೆಸರುಗಳು ಬೇರೆ ಬೇರೆ. ತಗರ ಪವಾಡದಲ್ಲಿ ಹೆಗ್ಗ ಗೌಡನ ಪ್ರಸ್ತಾಪವಿದ್ದರೆ ಸಿದ್ದಮಂಕ ಚರಿತ್ರೆಯಲ್ಲಿ ಪದ್ಮಗೊಂಡನ ಹೆಸರಿದೆ.

ಒಂದೇ ಕತೆಯನ್ನು ಭಿನ್ನ ನೆಲೆಯಲ್ಲಿ ಈ ಎರಡೂ ಕೃತಿಗಳು ಮಂಡಿಸುತ್ತವೆ. ತಗರ ಪವಾಡ ಎರಡು ಸುಳಿಗಳಲ್ಲಿ ಲಭಿಸಿದ್ದು ಅದರ ಪೂರ್ಣಪಠ್ಯ ಸಿಕ್ಕಿಲ್ಲ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books