ಭಾರತೀಯ ಕ್ಷಾತ್ರಪರಂಪರೆ

Author : ಶತಾವಧಾನಿ ಆರ್. ಗಣೇಶ

Pages 680

₹ 300.00




Year of Publication: 2002
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

ಭಾರತೀಯ ಕ್ಷಾತ್ರಪರಂಪರೆ ಐತಿಹಾಸಿಕ ಸಂಶೋಧನಾ ಪುಸ್ತಕವನ್ನು ಲೇಖಕ ಶತಾವಧಾನಿ ಆರ್.‌ ಗಣೇಶ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತೀಯರು ಅಥವಾ ಹಿಂದುಗಳು ಆಕ್ರಮಣಶೀಲರಲ್ಲ ಹಾಗೂ ಸೌಮ್ಯಸ್ವಭಾವದವರು ಎಂಬ ಭಾವನೆ ಎಷ್ಟು ಸತ್ಯವೋ ಅವರು ಆಕ್ರಮಕರನ್ನು ಎದುರಿಸುವಾಗ ಅಸೀಮ ಶೌರ್ಯವನ್ನು ಮೆರೆದಿದ್ದಾರೆಂಬುದೂ ಅಷ್ಟೇ ಸತ್ಯ. ಇದಕ್ಕೆ ಭಾರತದಲ್ಲಿ ಬ್ರಾಹ್ಮ ಮತ್ತು ಕ್ಷಾತ್ರಗಳೆರಡೂ ಸಮನ್ವಿತವಾಗಿರುವುದೇ ಕಾರಣ. ವೇದಕಾಲದಿಂದ ಈವರೆಗೆ ಭಾರತೀಯ ಶೌರ್ಯ ಅಥವಾ ಕ್ಷಾತ್ರ ಪರಂಪರೆ ಹೇಗೆ ಬೆಳೆದುಬಂತು ಎಂಬುದನ್ನು ತಮ್ಮ ಗಾಢ ಅಧ್ಯಯನದ ಮೂಲಕ ಶತಾವಧಾನಿ ಆರ್. ಗಣೇಶ್ ಅವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

About the Author

ಶತಾವಧಾನಿ ಆರ್. ಗಣೇಶ
(04 December 1962)

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ...

READ MORE

Related Books