ಕೊಡಗು-ಕೆನರಾ ರೈತ ಬಂಡಾಯ-1837

Author : ಬಿ. ಪ್ರಭಾಕರ ಶಿಶಿಲ

₹ 140.00




Published by: ಸಜ್ಜನ ಪ್ರತಿಷ್ಠಾನ
Address: ಬೀಜದಕಟ್ಟೆ, ಗೂನಡ್ಕ, ಸುಳ್ಯ, ದ.ಕ
Phone: 9986745169

Synopsys

ಲೇಖಕ ಬಿ. ಪ್ರಭಾಕರ ಶಿಶಿಲ ಅವರ ಸಂಶೋಧನಾ ಆಧಾರಿತ ಕೃತಿ ಕೊಡಗು-ಕೆನರಾ ರೈತ ಬಂಡಾಯ-1837. 1837ರಲ್ಲಿ ಬ್ರಿಟೀಷರ ವಿರುದ್ಧ ಕನ್ನಡ ಮ್ತು ಕೊಡಗು ಜಿಲ್ಲೆಯ ರೈತರು ದೊಡ್ಡ ರೀತಿಯಲ್ಲಿ ಬಂಡೆದ್ದರು. ಮಂಗಳೂರನ್ನು ವಶಪಡಿಸಿ ಎರಡು ವಾರಗಳ ಪರ್ಯಂತ ಆಡಳಿತ ನಡೆಸಿದರು. ಬಳಿಕ ಬ್ರಿಟೀಷರ ಒಡೆದು ಆಳುವ ನೀತಿಗೆ ಬಲಿಯಾಗಿ ಸೋಲುಂಡರು. ಈ ಘಟನೆಗೆ ಅಮರ ಸುಳ್ಯದ ಸ್ವಾತಂತ್ಯ್ರ, ಕೊಡಗು ಕೆನರಾ ಬಂಡಾಯ, ಕಲ್ಯಾಣಪ್ಪನ ಕಾಟಕಾಯಿ ಎಂಬಿತ್ಯಾದಿ ಹೆಸರುಗಳಿವೆ. ಇದರ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿ, ಈ ಕೃತಿಯನ್ನು ರಚಿಸಲಾಗಿದೆ.

About the Author

ಬಿ. ಪ್ರಭಾಕರ ಶಿಶಿಲ
(21 December 1953)

ಲೇಖಕ ಡಾ. ಪ್ರಭಾಕರ ಶಿಶಿಲ ಅವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಕೃತಿಗಳು:  ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು.  ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ . ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ಕುರಿತು ಡಾ. ಮೋಹನ ಕುಮಾರ ...

READ MORE

Related Books