ಆಧುನಿಕ ಕನ್ನಡದಲ್ಲಿ ಮಹಿಳಾ ಸಾಹಿತ್ಯ

Author : ಶಕುಂತಲಾ ಸಿದ್ಧರಾಮ ದುರಗಿ

Pages 398

₹ 175.00




Year of Publication: 1999
Published by: ಪ್ರಜ್ವಲ ಪ್ರಕಾಶನ
Address: 1-867/37/C, ಚೇತನ, ವೆಂಕಟೇಶ ನಗರ, ಕಲಬುರಗಿ-585102

Synopsys

ಹಿರಿಯ ಲೇಖಕಿ ಡಾ.ಶಕುಂತಲಾ ಸಿದ್ಧರಾಮ ದುರಗಿ ಅವರ ಸಂಶೋಧನಾ ಕೃತಿ 'ಆಧುನಿಕ ಕನ್ನಡದಲ್ಲಿ ಮಹಿಳಾ ಸಾಹಿತ್ಯ'.ಈ ಮಹಾಪ್ರಬಂಧಕ್ಕೆ 1982 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ. 1999ರಲ್ಲಿ ಕೃತಿ ರೂಪ ಪಡೆದಿದೆ. ಈ ಮಹಾಪ್ರಬಂಧವು 1901 ರಿಂದ 1975 ರವರೆಗಿನ ನಿರ್ದಿಷ್ಟ ಕಾಲಘಟ್ಟದ ಮಹಿಳಾ ಸಾಹಿತ್ಯ ಕುರಿತ ಸಂಶೋಧನಾಧ್ಯಯನವಾಗಿದೆ.ಈ ಸಂದರ್ಭದಲ್ಲಿ ಬರುವ ಮಹಿಳಾ ಸಾಹಿತ್ಯದ ಗಂಭೀರ ಅವಲೋಕನ, ಓದು, ಚಿಂತನೆ ಆಗಿರುವುದು ಸಂಶೋಧಕರ ಸಹನೆ ಮತ್ತು ಪರಿಶ್ರಮದ ಫಲ.

ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ, ಹೀಗೆ ಹೊಸ ಅಲೆಗಳಿಗೆ ತನ್ನನ್ನು ಒಡ್ಡಿಕೊಂಡು, ಅದರ ಪರಿಣಾಮವಾಗಿ ಹೊಸದೊಂದು ಬದಲಾದ ಆಯಾಮ ಕಾಣುತ್ತೇವೆ. ವಸಾಹತುಶಾಹಿ, ಸಮಾಜವಾದ, ಬಂಡವಾಳಶಾಹಿ ವಿರೋಧ ವಾದ, ಲೋಹಿಯಾವಾದ, ಗಾಂಧಿವಾದ, ಅಸ್ತಿತ್ವವಾದ, ಅಂಬೇಡ್ಕರ್ ವಾದ, ಇವು ಸೈದ್ಧಾಂತಿಕ ನೆಲೆಯಲ್ಲಿ ಬದುಕು ಮತ್ತು ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿವೆ. ಇಂತಹ ಹಲವಾರು ಮುಖಗಳ ಹಿನ್ನೆಲೆಯಲ್ಲಿ ಸೃಷ್ಟಿಯಾದ ಮಹಿಳಾ ಸಾಹಿತ್ಯವು ಹೇಗೆ ಹೊರ ಹೊಮ್ಮಿದೆ? ಎನ್ನುವುದರ ಮೌಲ್ಯ ಮಾಪನ, ವಿಶ್ಲೇಷಣೆ, ವಿಮರ್ಶೆ ನಡೆದಿರುವುದು ಈ ಕೃತಿಯ ಮೂಲ ಆಶಯ. ಮಹಿಳೆ ತನ್ನ ಸಾಹಿತ್ಯದಲ್ಲಿ ವ್ಯವಸ್ಥೆಯನ್ನು ನೋಡುವ ದೃಷ್ಟಿಕೋನ, ಸಂಪ್ರದಾಯ ನಿಷ್ಟೆ, ಮಿತಿಯೊಳಗೇ ದಾಟುವ ಪ್ರಕ್ರಿಯೆ, ಸಾಂಸ್ಕೃತಿಕ ಪ್ರತಿರೋಧ, ಸಂಘರ್ಷದ ನೆಲೆಗಳು, ಬದಲಾವಣೆಯ ತುಡಿತ, ಮುಂತಾದವುಗಳನ್ನು ತನ್ನ ಸೃಜನಶೀಲತೆಯಲ್ಲಿ ಸೆರೆಹಿಡಿದ ಸಾಹಸವನ್ನು ಈ ಅಧ್ಯಯನದ ಒಡಲಲ್ಲಿ ದಾಖಲಿಸಲಾಗಿದೆ.

ಅಧ್ಯಯನಕ್ಕೊಳಪಡಿಸಿದ ಕಾಲಮಾನದಲ್ಲಿ ಅರಳಿದ ಅನೇಕ ಮಹಿಳಾ ಸಾಹಿತ್ಯ ಕೃತಿಗಳನ್ನು ಪರಾಮರ್ಶಿಸಿದ ಶ್ರಮವಿದೆ. ಹಾಗೆಯೇ ಲೇಖಕಿಯರನ್ನು ನೇರವಾಗಿ ಸಂದರ್ಶಿಸಿ, ಬರಹದ ಆಳದ ನಿಗೂಢವನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಅದೊಂದು ಮೌಲಿಕವಾದ ವಿಶಾಲ ದೃಷ್ಟಿಯ ಫಲಿತಾಂಶ ನೀಡುವಲ್ಲಿ ಸಹಾಯಕವಾಗಿದೆ. ಡಾ.ಶಕುಂತಲಾ ದುರಗಿಯವರ ಪ್ರಾಮಾಣಿಕ ದೃಷ್ಟಿಕೋನದಿಂದಾಗಿ ನೇರ ವಿಮರ್ಶೆಯಲ್ಲಿ ನಿಷ್ಟುರ ಅಭಿಪ್ರಾಯಗಳೂ ಇವೆ. ಅಷ್ಟೇ ಆರೋಗ್ಯಕರವಾಗಿಯೂ ಇರುವುದು ಗಮನಾರ್ಹ. ಬೆಳೆಯ ಜೊತೆ ಕಳೆಯನ್ನೂ ಗುರುತಿಸಿರುವುದು ಭವಿಷ್ಯದ ಉತ್ತಮ ಸಾಹಿತ್ಯಾಭಿವೃದ್ದಿಗೆ ಕಾರಣವಾಗುತ್ತದೆ. ಇದು ಕೃತಿಯ ಹೆಚ್ಚುಗಾರಿಕೆಯೂ ಆಗಿದೆ. 

 

About the Author

ಶಕುಂತಲಾ ಸಿದ್ಧರಾಮ ದುರಗಿ
(11 April 1943)

ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ  ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು.  ಕೃತಿಗಳು-ಪ್ರಶಸ್ತಿಗಳು:  ಮಗ್ಗಲು ಮನೆ ಅತಿಥಿ ...

READ MORE

Related Books