
ಡಿ.ಎನ್.ಅಕ್ಕಿ ಅವರ ಸಂಶೋಧನಾ ಲೇಖನಗಳನ್ನು ಒಳಗೊಂಡ ಕೃತಿ ’ಸಿರಿನಾಡ ಸಿರಿ’. ಸಂಶೋಧಕ, ಸಾಹಿತಿ ಡಾ. ಹಂಪನಾ ಅವರು ಮುನ್ನುಡಿಯಲ್ಲಿ ’ ಮೂಲೆಮಡಕುಗಳಲ್ಲಿ, ದನದ ಕೊಟ್ಟಿಗೆಯಲ್ಲಿ, ತಿಪ್ಪೆಯಲ್ಲಿ ಅನಾಥವಾಗಿ, ಅಜ್ಞಾನವಾಗಿ, ಅಂಗಾತವಾಗಿ ಬಿದ್ದಿದ್ದ ಶಾಸನ, ನಾಣ್ಯ, ವಿಗ್ರಹ ಹೀಗೆ ಪರಂಪರೆಯ ಪಳಿಯುಳಿಕೆಗಳನ್ನು ಸಂಶೋಧನೆ ಮಾಡಿ ಸಂಗ್ರಹಿಸಿದ ಲೇಖನಗಳು ಸಗರನಾಡ ಸಿರಿ’ಯಲ್ಲಿವೆ. ಖ್ಯಾತ ಸಂಶೋಧಕ ಸೀತಾರಾಮ ಜಾಗೀರದಾರ್ ಕೃತಿಯ ಬೆನ್ನುಡಿಯಲ್ಲಿ ’ಶಹಾಪುರ ತಾಲೂಕು ವ್ಯಾಪ್ತಿಯ ಐತಿಹಾಸಿಕ ಮಹತ್ವದ ಸಂಗತಿಗಳನ್ನು ಈ ಕಿರುಹೊತ್ತಗೆಯಲ್ಲಿ ಸಂಗ್ರಹಿಸಲಾಗಿದೆ. ನಿನ್ನೆಯ ಈ ಐತಿಹಾಸಿಕ ದಾಖಲೆಗಳ ಅವ್ಯವಸ್ಥೆಗೆ ಡಿ.ಎನ್. ಅಕ್ಕಿ ಮರುಗಿದ್ಗಿದಾರೆ’ ಎಂದು ಅಕ್ಕಿ ಅವರ ಸಂಶೋಧನಾ ಕಳಕಳಿಯನ್ನು ಪ್ರಶಂಸಿಸಿದ್ದಾರೆ.
©2025 Book Brahma Private Limited.