ಎತ್ತಣ ಅಲ್ಲಮ ಎತ್ತಣ ರಮಣ?

Author : ಪ್ರಸನ್ನ ಸಂತೇಕಡೂರು

Pages 92

₹ 150.00




Year of Publication: 2019
Published by: ಶರಣು ವಿಶ್ವವಚನ ಫೌಂಡೇಶನ್‌
Address: ಮೈಸೂರು
Phone: 9108655013

Synopsys

ರಮಣ ಮಹರ್ಷಿಗಳ ಬದುಕು, ಸಿದ್ಧಾಂತದ ಕುರಿತು ವಿವರಿಸುವ ಕೃತಿ ಎತ್ತಣ ಅಲ್ಲಮ? ಎತ್ತಣ ರಮಣ?. ರಮಣ ಮಹರ್ಷಿಗಳ ಬಗ್ಗೆ ಬಹಳಷ್ಟು ಜನಕ್ಕೆ ತಿಳಿದಿದೆ. ಆದರೆ, ಅವರು ಪ್ರತಿಪಾದಿಸಿದ ದರ್ಶನವನ್ನ ಯಾವುದೇ ಸಿದ್ಧಾಂತಗಳಲ್ಲಿ ಇಂದು ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಅವರೊಬ್ಬ ಮಹಾದಾರ್ಶನಿಕ, ತತ್ವಜ್ಞಾನಿ, ದೇವಮಾನವ ಎಂದು ಎಲ್ಲರೂ ಒಪ್ಪುತ್ತಾರೆ. ಇಪ್ಪತ್ತನೇ ಶತಮಾನದಲ್ಲಿಯೇ ಬದುಕ್ಕಿದ್ದ ಇಂತಹ ಮಹಾಯೋಗಿಗೆ ಆಧ್ಯಾತ್ಮದತ್ತ ಸೆಳೆದದ್ದು ಏನು? ಅವರ ತತ್ವದ ತಿರುಳೇನು? ಅವರ ಪ್ರಕಾರ ದೇವರು ಎಂದರೆ ಯಾರು? ಹನ್ನೆರಡನೇ ಶತಮಾನದಲ್ಲಿ ಬದುಕಿದ್ದ ಕನ್ನಡಿಗರ ಅಲ್ಲಮಪ್ರಭುವನ್ನ ವಿಶ್ವದ ಶ್ರೇಷ್ಟಮಟ್ಟದ ತತ್ವಜ್ಞಾನಿಗಳಿಗೆ ಹೋಲಿಸುತ್ತಾರೆ. ಅಲ್ಲಮ ಮತ್ತು ಬುದ್ಧನನ್ನ, ಅಲ್ಲಮ ಮತ್ತು ಕಬೀರರನ್ನ, ಅಲ್ಲಮ ಮತ್ತು ರಾಮಕೃಷ್ಣ ಪರಮಹಂಸರನ್ನ ಜೊತೆಯಲ್ಲಿ ಹೋಲಿಕೆ ಮಾಡುವ ಪುಸ್ತಕಗಳು ಬಂದಿವೆ. ಅಲ್ಲಮನನ್ನ ಶೇಕ್ಸ್ಪಿಯರ್, ಸಾಕ್ರೇಟಿಸ್, ರೂಮಿ ಇಂತಹ ಮಹಾತತ್ವಜ್ಞಾನಿಗಳ ಸರಿಸಮನಾದವನು ಎಂದು ಎಚ್ ತಿಪ್ಪೇರುದ್ರಸ್ವಾಮಿಯವರು ಹೇಳಿದ್ದಾರೆ. ಇಂತಹ ಅಲ್ಲಮಪ್ರಭುವಿಗೂ ಅರುಣಾಚಲದ ಶ್ರೀರಮಣ ಮಹರ್ಷಿಗೂ ಎತ್ತಣಿಂದೆತ್ತ ಸಂಬಂಧ? ಈ ಕುರಿತು ಪುಸ್ತಕವು ವಿವರಿಸಿದೆ. 

About the Author

ಪ್ರಸನ್ನ ಸಂತೇಕಡೂರು

ಪ್ರಸನ್ನ ಸಂತೇಕಡೂರು, ಮೂಲತಃ ಶಿವಮೊಗ್ಗ ಸಮೀಪದ ಸಂತೇಕಡೂರಿನವರು. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು, ಸುಮಾರು ಹತ್ತು ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದರು. ಮೊದಲು ವರ್ಜಿನೀಯಾ ಸಂಸ್ಥಾನದ ರಿಚ್ಮಂಡ್ ನಗರದ ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ನಂತರ ಅಲ್ಲಿಯೇ ಹಂಟರ್ ಹೊಲ್ಮ್ ಮ್ಯಾಕ್ವಾಯಿರ್ ಸಂಶೋಧನಾ ಕೇಂದ್ರ ಮತ್ತು ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ವಿದೇಶಗಳಲ್ಲಿರುವ ಭಾರತೀಯ ಪ್ರತಿಭಾವಂತ ...

READ MORE

Related Books