ಕನ್ನಡ ನಾಟಕ ಮತ್ತು ವಾಸ್ತವತೆ

Author : ಬಸವರಾಜ ಪಿ. ಡೋಣೂರ

Pages 213

₹ 100.00




Year of Publication: 2008
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

‘ಕನ್ನಡ ನಾಟಕ ಮತ್ತು ವಾಸ್ತವತೆ’ ಬಸವರಾಜ ಡೋಣೂರರ ಸಂಶೋಧನಾ ಗ್ರಂಥ. ಹಿರಿಯ ಲೇಖಕ ಕೀರ್ತಿನಾಥ ಕುರ್ತಕೋಟಿ ಮಾರ್ಗದರ್ಶನದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸಿದ್ದ ಮಹಾಪ್ರಬಂಧ ವಿದು. ವಾಸ್ತವತೆಯ ಇತಿಹಾಸ, ಅನುಕರಣೆ ಮತ್ತು ವಾಸ್ತವತೆ, ವಾಸ್ತವತೆಯ ಸ್ವರೂಪ, ವಾಸ್ತವತೆಯ ಉದ್ದೇಶ, ಸಮೂಹ ಮಾಧ್ಯಮಗಳಲ್ಲಿ ವಾಸ್ತವತೆ, ಇಂಗ್ಲಿಷ್ ಸಾಹಿತ್ಯದಲ್ಲಿ ವಾಸ್ತವತೆ ಮತ್ತು ಕನ್ನಡ ಸಾಹಿತ್ಯದಲ್ಲಿ ವಾಸ್ತವತೆ ಎಂಬ ಅಂಶಗಳ ಆಧಾರದಲ್ಲಿ ವಿಷಯಗಳನ್ನು ವಿವರಿಸಲಾಗಿದೆ.

ನಂತರದ ಭಾಗದಲ್ಲಿ ನವೋದಯದ ನಾಟಕಕಾರರ ಕುರಿತ ಅಧ್ಯಯನಗಳಿವೆ. ನವೋದಯ ಚಳವಳಿ, ಟಿ.ಪಿ. ಕೈಲಾಸಂ, ಶ್ರೀರಂಗ ಅವರ ವಿವರಣೆಗಳೊಂದಿಗೆ ರಂಗಭೂಮಿಯನ್ನು ವಿಶ್ಲೇಷಣೆ ಮಾಡಲಾಗಿದೆ.

ಮೂರನೇ ಭಾಗದಲ್ಲಿ ’ನವ್ಯ ನಾಟಕಕಾರರ’ ಅಧ್ಯಯನವಿದೆ. ನವ್ಯ ಚಳವಳಿ, ನವ್ಯ ನಾಟಕ ಮತ್ತು ಐತಿಹಾಸಿಕತೆ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ ಕುರಿತ  ಸಂಶೋಧನಾ ಲೇಖನಗಳಿವೆ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books