ಮುಗಿಲೆತ್ತರದಲ್ಲಿ ನಾ ಕಂಡ ಕಾರಂತರು

Author : ಲಲಿತಮ್ಮ ಡಾ. ಚಂದ್ರಶೇಖರ್

Pages 15

₹ 3.00




Published by: ಕಾರ್ತಿಕೇಯ ಪ್ರಕಾಶನ ಹರಿಹರ
Address: ಸಪ್ತಗಿರಿ ಹರಿಹರ

Synopsys

‘ಮುಗಿಲೆತ್ತರದಲ್ಲಿ ನಾ ಕಂಡ ಕಾರಂತರು’ ಕೃತಿಯು ಲಲಿತಮ್ಮ ಚಂದ್ರಶೇಖರ್ ಅವರ ಕೃತಿಯಾಗಿದೆ. ಇಲ್ಲಿ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕೃತಿಯ ಕುರಿತು ಲೇಖಕಿ ವಿವರಿಸುತ್ತಾ, ತಾನು ಹೇಗೆ ಕಾರಂತರ ಸಾಹಿತ್ಯದ ಅಭಿಮಾನಿಯಾದೆ ಎನ್ನುವುದನ್ನು ತಿಳಿಸುತ್ತಾರೆ. ಅಷ್ಟೇಅಲ್ಲದೆ ಕಾರಂತರ ಕಾದಂಬರಿ ಕಡಲಿನಂತೆ. ಕಡಲಿನ ನೀರನ್ನು ಪಾತ್ರೆಯಲ್ಲಿ ತುಂಬಲು ಹೋಗಿ ಅಯ್ಯೋ! “ಕಡಾಯಿಯಲ್ಲಿ ಕಡಲು ತುಂಬೇನೆ” ಎಂದು ಕಡಲಿಗೇ ನೀರನ್ನು ಸುರಿದು ಕಡಲನ್ನು ಅವರ ಸೌಂದರ್ಯವನ್ನು, ರುದ್ರ ಗಂಭೀರತೆಯನ್ನು ನೋಡಿ ಸವಿಯುತ್ತಾ ಮೈಮರೆತಂತೆ. ಕಾರಂತರ ಕಾದಂಬರಿಗಳನ್ನು ಓದಬೇಕು, ಸವಿಯಬೇಕು, ಸವಿದು ಮತ್ತೆ ಓದಬೇಕು. ಮಲೆನಾಡಿನ ಜೀವನದ ಬದುಕಿನ ಅಮರ ಚಿತ್ರಗಳು ಕಾರಂತರ ಕಾದಂಬರಿಗಳು. ಅಲ್ಲಿನ ಜನಜೀವನವನ್ನು, ಮಲೆನಾಡಿನ ಸೌಂದರ್ಯವನ್ನು, ಕಾಡಿನ ಕಥನವನ್ನು ಕಾರಂತರ ಕಾದಂಬರಿಗಳಲ್ಲಿ ಮಾತ್ರ ಕಾಣಬಹುದು.

About the Author

ಲಲಿತಮ್ಮ ಡಾ. ಚಂದ್ರಶೇಖರ್
(07 October 1932)

ಲಲಿತಮ್ಮ ಡಾ. ಚಂದ್ರಶೇಖರ್ ಅವರು ಓದಿದ್ದು  ಎಸ್.ಎಸ್.ಎಲ್.ಸಿ.ವರೆಗೆ.  ರಾಷ್ಟ್ರಾಭಾಷಾ ವಿಶಾರದ ಪರೀಕ್ಷೆ ಮುಗಿಸಿದ್ದಾರೆ. 1932 ಅಕ್ಟೋಬರ್‌ 07ರಂದು ಜನಿಸಿದರು. ತಂದೆ ನಾರಾಯಣಪ್ಪ , ತಾಯಿ ಲಕ್ಷ್ಮೀನರಸಮ್ಮ. ಪ್ರಕಟಿತ ಕೃತಿಗಳು: ಉಡುಗೊರೆ (ಕವನ ಸಂಕಲನ), ಗೌರಿಪೂಜೆ (ಭಕ್ತಿಗೀತೆಗಳು), ಪರಿವರ್ತನೆ (ಕಥಾ ಸಂಕಲನ), ವೈದ್ಯರ ಮಡದಿ (ಜೀವನ ಚರಿತ್ರೆ), ಉಮಾತಂಗಿ (ವ್ಯಕ್ತಿಚಿತ್ರ), ಎಮ್ಮೆಯ ಖೆಡ್ಡಾ (ಹಾಸ್ಯ ಸಾಹಿತ್ಯ), ಆಂಜನೇಯ (ಆಧ್ಯಾತ್ಮಿಕ), ಬಣ್ಣದ ಗಿಲಕಿ (ಮಕ್ಕಳ ಸಾಹಿತ್ಯ), ಲೆಟರ್‌ಪ್ಯಾಡ್ (ಭಾಷಣ ಸಂಗ್ರಹ). ‘ಮಲ್ಲಿಗೆ ಚಪ್ಪರ, ತಪಸ್ವಿಗಳು, ಕೊಡಗಿನ ಗೌರಮ್ಮ, ಸ್ವಾಮಿ ಶಿವಾ ನಂದತೀರ್ಥರು, ವನಸುಮ, ಲಕ್ಷ್ಮಣ ರಾವ್ ಕಿರ್ಲೋಸ್ಕರ್‌, ರಶ್ಮಿ ಸರ್ಕಸ್ ಕಂಪನಿ, ಜಯಾ, ಮಗು ನೀ ನಗುತಿರು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ‘ಧಾರವಾಡ ...

READ MORE

Related Books