ಬಹುಜನ ಸಂಸ್ಕೃತಿವಾದ ಮತ್ತು ಲೇಖಕ

Author : ಚಂದ್ರಕಾಂತ ಪೋಕಳೆ

Pages 58

₹ 40.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಬಹುಜನ, ಬಹುಸಂಸ್ಕೃತಿ ಎಂಬುದೇ ಅರ್ಥ ಕಳೆದುಕೊಳ್ಳುತ್ತಿರುವ ಹೊತ್ತಿದು. ಭಾಷೆ, ನಾಗರಿಕತೆ, ಜನ ಸಮೂಹವೆಲ್ಲಾ ಏಕರೂಪಕ್ಕೆ ತಿರುಗುತ್ತಿರುವ ಸಂದರ್ಭ ಇದು. ವೈವಿಧ್ಯತೆ ಇಲ್ಲವಾಗಿ ಎಲ್ಲೆಡೆಯೂ ಏಕತಾನತೆ ರೂಪುಗೊಳ್ಳುತ್ತಿದೆ. ನಾಗರಿಕತೆ, ಸಂಸ್ಖೃತಿ, ಜನಜೀವನವನ್ನು ಅದು ಏಕರೂಪಗೊಳಿಸುತ್ತಿದೆ. ಸಾಹಿತ್ಯದೊಳಗೂ ಈ ಏಕತಾನತೆ ಕಾಣುತ್ತಿದೆ. ಹೀಗೆ ಏಕತ್ರಗೊಳ್ಳುವುದರಿಂದ ಆಗುವ ಸಮಸ್ಯೆಗಳು, ಲೇಖಕ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮಹತ್ವದ ತೀರ್ಮಾನಗಳನ್ನು ’ಬಹುಜನ ಸಂಸ್ಕೃತಿವಾದ ಮತ್ತು ಲೇಖಕ’  ಕೃತಿ ಚರ್ಚಿಸುತ್ತದೆ. 

ಲೇಖಕ ಜಯಂತ ಪವಾರ ಅವರು ಬರೆದಿರುವ ಕೃತಿಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ತಂದಿದ್ದಾರೆ. 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books