ನಾಗವಂಶ- ದಲಿತ ಅಸ್ಮಿತೆ

Author : ಸಿದ್ರಾಮ ಕಾರಣಿಕ

Pages 56

₹ 40.00




Year of Publication: 2013
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ತಳಸಮುದಾಯದವರ ಗುರುತಿನ ಕುರಿತು ಮಾತನಾಡುವ ಪ್ರಸ್ತುತ ಕೃತಿಯನ್ನು ಬರೆದವರು ಶ್ರೀನಿವಾಸ ಭಾಲೆರಾವ್‌. ಅದನ್ನು ಕನ್ನಡೀಕರಿಸಿರುವುದು ಸಿದ್ರಾಮ ಕಾರಣಿಕ. ದಲಿತ ಅಸ್ಮಿತೆ ನಿಜವಾಗಿಯೂ ಏನು ಎಂಬುದನ್ನು ಕೃತಿ ವಿಶಿಷ್ಟ ರೀತಿಯಲ್ಲಿ ಪ್ರಸ್ತಾಪಿಸುತ್ತದೆ. ಮನುಸ್ಮೃತಿಯ ಸಾಂಸ್ಕೃತಿಕ ರಾಜಕಾರಣ, ಶ್ರಮಿಕ ವರ್ಗ ಬೆಲೆ ಕಳೆದುಕೊಂಡಿರುವುದು, ಬಹುದೊಡ್ಡ ಪರಂಪರೆಯೊಂದು ಮೇಲ್ಜಾತಿಗಳ ಹೊಡೆತಕ್ಕೆ ಸಿಲುಕಿದ್ದನ್ನು ವಿಶಿಷ್ಟವಾಗಿ ಚಿತ್ರಿಸಲಾಗಿದೆ.

ಕೆಳಜಾತಿಯವರಿಗೆ ಒಂದು ಅಸ್ಮಿತೆಯನ್ನು ತಂದುಕೊಟ್ಟ ಅಂಬೇಡ್ಕರ್‌, ಅದರೊಂದಿಗೆ ಸಾಮಾಜಿಕ ಹೋರಾಟಗಾರರ ಶ್ರಮ, ಶೂದ್ರರು ದಲಿತರಿಗೂ ಇರುವ ವ್ಯತ್ಯಾಸಗಳನ್ನು ಕೃತಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ. 

About the Author

ಸಿದ್ರಾಮ ಕಾರಣಿಕ

ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಸಿದ್ರಾಮ ಕಾರಣಿಕ ಅವರು 'ದಲಿತ ಬಂಡಾಯ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎಂಬ ವಿಷಯ ಕುರಿತ ಸಂಶೋಧನೆಗೆ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕವನ, ಕತೆ, ಅನುವಾದ, ನಾಟಕ, ಲೇಖನ ಸಂಗ್ರಹ ಸೇರಿದಂತೆ ಇದುವರೆಗೆ 18 ಕೃತಿಗಳನ್ನು ಪ್ರಕಟಿಸಿದ್ದಾರೆ. ಸೂರ್ಯಕಾಂತಿ ಎಂಬ ಸಿನಿಮಾ ಸೇರಿದಂತೆ ಸಿನಿಮಾ ಮತ್ತು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದ ಅವರು ಅಕ್ಟೋಬರ್ 21, 2021 ರಂದು ನಿಧನರಾದರು.  ಕೃತಿಗಳು: ದಲಿತ ಅಸ್ಮಿತೆ, ದೇವದಾಸಿ ಬೆತ್ತಲೆ ಸೇವೆ, ದಲಿತ ದಿಗ್ವಿಜಯ ...

READ MORE

Related Books