ಹಿಂದ್ ಸ್ವರಾಜ್ಯ

Author : ಸಿದ್ದವನಹಳ್ಳಿ ಕೃಷ್ಣಶರ್ಮ

Pages 120

₹ 90.00




Year of Publication: 2012
Published by: ಗಾಂಧೀಯಾನ ಪಬ್ಲಿಷಿಂಗ್ ಹೌಸ್,
Address: ಬೆಂಗಳೂರು

Synopsys

ಮೋಹನದಾಸ್ ಕರಮ್ ಚಂದ್ ಗಾಂಧಿ (ಮಹಾತ್ಮ ಗಾಂಧೀಜಿ)  ಅವರು ಬರೆದ ಕೃತಿ-ಹಿಂದ್ ಸ್ವರಾಜ್ಯ. ಈ ಕೃತಿಯನ್ನು ಹಿರಿಯ ಲೇಖಕ -ಗಾಂಧಿವಾದಿ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಸಾಮರ್ಥ್ಯ ಎಂದರೆ ಗ್ರಾಮೀಣ ಜನ-ಸಂಸ್ಕೃತಿ, ಕಲೆ, ಸಾಹಿತ್ಯ ಇತ್ಯಾದಿ. ಭಾರತೀಯತೆಯ ಘನತೆ-ಗೌರವಗಳನ್ನು ಎತ್ತಿ ಹಿಡಿಯುವ ವಿಚಾರಗಳನ್ನು ಗಾಂಧೀಜಿ ಅವರು ಇಲ್ಲಿ ವ್ಯಕ್ತಪಡಿಸಿದ್ದಾರೆ. ಎಲ್ಲ ಜಾತಿ ಧರ್ಮ ವಿಶೇಷತೆಗಳನ್ನು ಒಳಗೊಂಡ ಭಾರತವು ತನ್ನ ವೈವಿಧ್ಯತೆಯೊಂದಿಗೆ ವಿಶ್ವದ ಗಮನ ಸೆಳೆದಿದೆ. ವಿಶ್ವದ ಯಾವ ಮೂಲೆಯಲ್ಲೂ ಇಂತಹ ದೇಶವಿಲ್ಲ. ಆದ್ದರಿಂದ, ವೈವಿಧ್ಯತೆಯಲ್ಲೂ ಭಾರತವು ಏಕತೆಯನ್ನು ಒಳಗೊಂಡಿದ್ದು, ಐಕ್ಯತೆಯೂ ಮೆರೆದಿದೆ. ಸಮಾಜದ ಸಾಮರಸ್ಯವು ಇಡೀ ದೇಶದ ಸುವ್ಯವಸ್ಥೆಯು ಆಗಿದೆ ಎಂಬ ಅಂಶಗಳನ್ನು ಗಾಂಧೀಜಿ ಅವರು ತುಂಬಾ ಅಭಿಮಾನದೊಂದಿಗೆ ಹೇಳಿಕೊಂಡಿದ್ದಾರೆ.

 

About the Author

ಸಿದ್ದವನಹಳ್ಳಿ ಕೃಷ್ಣಶರ್ಮ
(31 July 1904 - 02 October 1973)

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...

READ MORE

Related Books