ಆಧುನಿಕ ವಿಜ್ಞಾನ

Author : ನಾಗರಾಜ ವಸ್ತಾರೆ

Pages 352

₹ 285.00




Year of Publication: 2019
Published by: ಸಾಕ್ಷಿ ಪ್ರಕಾಶನ
Address: ದಾಂಡೇಲಿ, ಜಿಲ್ಲೆ ಉತ್ತರಕನ್ನಡ

Synopsys

ಬಿ.ವಿ. ಸುಬ್ಬರಾಯಪ್ಪ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ನಾಗರಾಜ ವಸ್ತಾರೆ ಅವರು ಕನ್ನಡಕ್ಕೆ ಅನುವಾದಿಸಿದ್ದ ಕೃತಿ-ಆಧುನಿಕ ಭಾರತ-ಐತಿಹಾಸಿಕ ಹಾಗೂ ಸಾಮಾಜಿಕ ಸಮಸ್ಯೆಗಳು. ಪಾರಿಭಾಷಿಕ ಪದಗಳ ಮೂಲರೂಪವನ್ನು ಕೊಟ್ಟಿರುವುದರಿಂದ ಪಠ್ಯವನ್ನು ಅರ್ಥೈಸಿಕೊಳ್ಳಲು ಅನುಕೂಲವಾಗಿದೆ. ವಿಜ್ಞಾನರಹಿತ ಧರ್ಮವು ಕುರುಡಾಗಿರುತ್ತದೆ ಎಂಬ ವಿಜ್ಞಾನಿ ಐನ್ ಸ್ಟಿನ್ ಮಾತು ಈ ಕೃತಿಗೆ ಅನ್ವಯಿಸುತ್ತಿದ್ದು, ಮೂಲವಿಜ್ಞಾನವನ್ನು ಎತ್ತಿ ಹಿಡಿದಿದೆ. ಪ್ರಾಚೀನ ಹಾಗೂ ಆಧುನಿಕ ಭಾರತೀಯ ವಿಜ್ಞಾನವನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ವಿಜ್ಞಾನ ಹಾಗೂ ಧರ್ಮವು ಪರಸ್ಪರ ಪೂರಕವಾಗಿರಬೇಕು ಎಂಬ ಮಾನವೀಯ ಗುಣವನ್ನು ಬೋಧಿಸುತ್ತದೆ.

About the Author

ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್‌, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books