ದಲಿತ ತತ್ವ

Author : ಬಿ. ಸುಜ್ಞಾನಮೂರ್ತಿ

Pages 80

₹ 60.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಭಾರತದ ಬಹುದೊಡ್ಡ ಚಿಂತಕ ಕಂಚ ಐಲಯ್ಯ ಅವರ ’ದಲಿತತತ್ವ’ ಶೋಷಿತರ ಪರವಾದ ಚಿಂತನೆಯ ಮೊತ್ತ.
ದುಡಿಯುವ ವರ್ಗ ಆಹಾರ ಮತ್ತಿತರ ವಸ್ತುಗಳನ್ನು ಉತ್ಪಾದಿಸುತ್ತದೆ, ಸೇವೆಗಳನ್ನು ಒದಗಿಸುತ್ತದೆ. ಆ ಮೂಲಕ ಸಮಾಜದ ಕಟ್ಟುವಿಕೆಗೆ ಶ್ರಮಿಸುತ್ತದೆ. ಇದರ ಅಂಗವಾಗಿ ಅವರೊಳಗೆ ನಡತೆ, ಸಂಸ್ಕೃತಿ, ರೂಢಿ- ಸಂಪ್ರದಾಯಗಳು ಮೊಳೆಯುತ್ತವೆ. ಇದರ ಆಧಾರದ ಮೇಲೆ ಅವರ ಚಾರಿತ್ರಿಕ, ನ್ಯಾಯಿಕ, ರಾಜಕೀಯ ವಿಚಾರಗಳು ರೂಪುಪಡೆದಿವೆ. ಆದರೆ ಈ ಪ್ರಕ್ರಿಯೆಗಳ ವಿರುದ್ಧವಾಗಿ ಕೆಲಸ ಮಾಡುವ ಶಕ್ತಿಗಳೂ ಇವೆ. ಆ ಶಕ್ತಿಗಳನ್ನು ಪ್ರಶ್ನಿಸುತ್ತಲೇ ದಲಿತತತ್ವವನ್ನು ಕಟ್ಟಬೇಕು ಎನ್ನುವ ಒತ್ತಾಸೆ ಕೃತಿಯದ್ದು. ಬೇರೆ ಬೇರೆ ಸಮುದಾಯಗಳ ವಿಭಿನ್ನ ದುಡಿಮೆಗಳ ಚಿತ್ರಣವನ್ನು ಕೃತಿಯಲ್ಲಿ ಕಾಣಬಹುದು. 

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books