ಸಪ್ತಕ್ರಾಂತಿ, ಕಾಂಚನಮುಕ್ತಿ

Author : ಹಸನ್ ನಯೀಂ ಸುರಕೋಡ

Pages 256

₹ 180.00




Year of Publication: 2014
Published by: ಲೋಹಿಯಾ ಜನ್ಮಶತಾಬ್ಡಿ ಪ್ರತಿಷ್ಠಾನ
Address: ಕಪ್ಪುಗಲ್ಲು ರಸ್ತೆ, ಬಳ್ಳಾರಿ

Synopsys

ಹಿರಿಯ ಲೇಖಕ ಹಸನ್ ನಯಿಂ ಸುರಕೋಡ ಅವರು ಸಮಾಜವಾದಿ ನಾಯಕ -ಚಿಂತಕ ರಾಮಮನೋಹರ ಲೋಹಿಯಾ ಅವರು ಇಂಗ್ಲಿಷಿನಲ್ಲಿ ಬರೆದ ಹತ್ತು ಬಿಡಿ ಲೇಖನಗಳನ್ನು ‘ಸುಪ್ತ ಕ್ರಾಂತಿ, ಕಾಂಚನಮುಕ್ತಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಮನೋಹರ ಲೋಹಿಯಾ ಅವರು ಉತ್ತಮ ಮುಂದಾಳತ್ವ ಹೊಂದಿದವರು. ಅವರು ಒಬ್ಬ ಮುತ್ಸದ್ಧಿ.ಭಾರತೀಯ ಸಂಸ್ಕೃತಿ, ಜಾತಿ ಪದ್ಧತಿ, ಸಮಾಜವಾದ ಇತ್ಯಾದಿ ಕುರಿತು ಪ್ರಬುದ್ಧ ಲೇಖನಗಳನ್ನು ಬರೆಯುವ ಮೂಲಕ ತಮ್ಮದೇ ಆದ ಓದುವ ವರ್ಗವನ್ನು ಕಾಯ್ದುಕೊಂಡಿದ್ದರು. ಅವರ ಚಿಂತನೆ ಇಂದಿಗೂ ಪ್ರೇರಣೆ ನೀಡುತ್ತದೆ. ಬರಹ-ಚಿಂತನೆಗಳ ಮೂಲಕ ರಾಮಮನೋಹರ ಲೋಹಿಯಾ ಅವರ ವ್ಯಕ್ತಿತ್ವವವನ್ನು ಕಟ್ಟಿಕೊಡುವ ಕೆಲಸವೂ ಈ ಕೃತಿಯು ಜೊತೆಜೊತೆಗೆ ಮಾಡುತ್ತದೆ.

About the Author

ಹಸನ್ ನಯೀಂ ಸುರಕೋಡ

ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...

READ MORE

Related Books