ದಲಿತ ರಾಜಕೀಯ-ಸಚಿತ್ರ ದರ್ಶನ

Author : ಬಿ. ಸುಜ್ಞಾನಮೂರ್ತಿ

Pages 142

₹ 120.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಮಾನವ ಹಕ್ಕುಗಳ ಹೋರಾಟಗಾರ, ಕೋಮುಸಾಮರಸ್ಯದ ಪ್ರತಿಪಾದಕ ರಾಮ್ ಪನಿಯಾನಿ ಅವರ ’ದಲಿತ ರಾಜಕೀಯ ಸಚಿತ್ರ ದರ್ಶನ’ ಕೃತಿ ಜಾಗತೀಕರಣದ ಸಂದರ್ಭದಲ್ಲಿ ದಲಿತರ ಸ್ಥಿತಿಗತಿಗಳನ್ನು ಕುರಿತು ವಿಶಿಷ್ಟವಾಗಿ ಚರ್ಚಿಸುತ್ತದೆ. ಸ್ವಾತಂತ್ಯ್ರ ದೊರೆತು ಎಷ್ಟೋ ದಶಕಗಳು ಸಂದರೂ ದಲಿತರಿಗೆ ವಿಮೋಚನೆ ದೊರೆತಿಲ್ಲದಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

ಇಲ್ಲಿ ದಲಿತರ ಜೀವನ ಕುರಿತು ಚಿತ್ರಗಳಿವೆ, ಅವರ ಸ್ಥಿತಿಯನ್ನು ಕರಾರುವಕ್ಕಾಗಿ ಹೇಳುವ ಅಂಕಿ ಅಂಶಗಳಿವೆ ಅಲ್ಲದೆ ಪನಿಯಾನಿ ಅವರೊಂದಿಗೆ ನಡೆದ ಪ್ರಶ್ನೋತ್ತರ ಸಂವಾದ ಇದೆ. ಮೀಸಲಾತಿ, ಅಂಬೇಡ್ಕರ್, ದಲಿತರ ಮುಂದಿನ ಸವಾಲುಗಳು, ದಲಿತರ ರಕ್ಷಿಸುವ ಕಾಯ್ದೆಗಳು ಸೋಲುತ್ತಿರುವ ಪರಿಯನ್ನು ಇಲ್ಲಿ ವಿವರಿಸಲಾಗಿದೆ. ಕೃತಿಯನ್ನು ಬಿ. ಸುಜ್ಞಾನಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ​​​​​​

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books