ಆದಿಪುರಾಣ ದೀಪಿಕೆ

Author : ತ.ಸು. ಶಾಮರಾಯ

Pages 148

₹ 200.00




Year of Publication: 1991
Published by: ಚಂದ್ರಗುಪ್ತ ಗ್ರಂಥಮಾಲೆ
Address: ಶ್ರವಣ ಬೆಳಗೋಳ, ಹಾಸನ ಜಿಲ್ಲೆ (ಕರ್ನಾಟಕ)

Synopsys

‘ಆದಿಪುರಾಣ ದೀಪಿಕೆ ’ ಕೃತಿಯು ತ.ಸು ಶಾಮರಾಯ ಹಾಗೂ ಪ. ನಾಗರಾಜಯ್ಯ ಅವರ ಸಂಪಾದಿತ ಕೃತಿ. ಶ್ರವಣ ಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಬರೆದ ನುಡಿತೋರಣದಲ್ಲಿ ‘ಆದಿಪುರಾಣ 16 ಆಶ್ವಾಸಗಳ ಕಾವ್ಯ. 1630 ವಿವಿಧ ಪದ್ಯಗಳುಳ್ಳ ಹಾಗೂ ಹಲವು ಗದ್ಯಭಾಗಗುಳ್ಳ ಚಂಪೂ ಕಾವ್ಯ. ಕವಿ ಇದನ್ನು ಕೇವಲ ಮೂರು ತಿಂಗಳಿನಲ್ಲಿ ಬರೆದು ಮುಗಿಸಿದೆ ಎಂದಿದ್ದಾನೆ. ಕ್ರಿ.ಶ 941 ರಲ್ಲಿ ಈ ಕಾವ್ಯ ಪೂರ್ಣಗೊಂಡಿತು. ಇದರಲ್ಲಿ ಭಗವಾನ್ ಜಿನಸೇನಾಚಾರ್ಯರು ಪೂರ್ವಪುರಾಣದಲ್ಲಿ ಪುರಾಣ ಮಾರ್ಗದಲ್ಲಿ ಬಿತ್ತರಿಸಿದ ಆದಿತೀರ್ಥಂಕರ ವೃಷಭನಾಥರ ಹಾಗೂ ಆವರ ಮಕ್ಕಳಾದ ಭರತ -ಬಾಹುಬಲಿಯರ ಕಥೆಯನ್ನು ಪಂಪ ಕಾವ್ಯಮಾರ್ಗದಲ್ಲಿ ನಿರೂಪಿಸಿದ್ದಾನೆ.  ಕಾವ್ಯದ ಉತ್ಕೃಷ್ಟತೆ. ಜಿನಧರ್ಮ ಶ್ರದ್ಧೆ, ವಾಗ್ ವೈಭವ -ಇವು ಮೂರೂ ಮೇಳೈಸಿದ ಸತ್ವಯುತ ಕಾವ್ಯ ಆದಿಪುರಾಣ, ಪಂಪನ ಈ ಕಾವ್ಯ , ಮುಂದಿನ ಜೈನ ಪುರಾಣ ಕವಿಗಳಿಗೆ ಒಂದು ಶ್ರೇಷ್ಠ ಮಾದರಿಯಾಯಿತು’ ಎಂದು ಪ್ರಶಂಸಿಸಿದ್ದಾರೆ. 

About the Author

ತ.ಸು. ಶಾಮರಾಯ
(12 June 1906 - 21 August 1998)

ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...

READ MORE

Related Books