ಶ್ರೀ ಮಹಾಭಾರತ ಸಂಪುಟ-2

Author : ಜಿ.ಎನ್. ರಂಗನಾಥ ರಾವ್

Pages 424

₹ 360.00




Year of Publication: 2019
Published by: ವಸಂತ ಪ್ರಕಾಶನ
Address: #360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್‌, ಜಯನಗರ, ಬೆಂಗಳೂರು-560011
Phone: 08022443996

Synopsys

ಪ್ರೊ. ಎಸ್.ಎಲ್. ಶೇಷಗಿರಿ ರಾವ್‌ ಅವರು ಇಂಗ್ಲಿಷ್‌ನಲ್ಲಿ ಬರೆದ ಕೃತಿಯನ್ನು ಜಿ.ಎನ್. ರಂಗನಾಥ ರಾವ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಲ್ಕು ಸಂಪುಟಗಳಲ್ಲಿ ಅನುವಾದವಾಗಿರುವ ಈ ಕೃತಿಯ ಎರಡನೇ ಸಂಪುಟ ಇದಾಗಿದೆ. ಇದರಲ್ಲಿ ಎರಡು ಪರ್ವಗಳಿವೆ. ಒಂದು ಅರಣ್ಯ ಪರ್ವ ಹಾಗೂ ಎರಡನೇಯದ್ದು ವಿರಾಟ ಪರ್ವ. ಅರಣ್ಯ ಪರ್ವದಲ್ಲಿ ಕಾಮಧೇನುವಿನ ಕಥೆ, ಪ್ರಹ್ಲಾದನ ಕಥೆ, ನಳ ದಮಯಂತಿಯರ ಕಥೆ, ಅಗಸ್ತ್ಯ ಮತ್ತು ಇಲ್ವಲ ಸಹೋದರರ ಕಥೆ, ಪರಶುರಾಮ ಮತ್ತು ಶ್ರೀರಾಮರ ಕಥೆ, ದಧೀಚಿಯ ಕಥೆ, ಅಗಸ್ತ್ಯ ಮತ್ತು ವಿಂಧ್ಯ ಪರ್ವತದ ಕಥೆ, ಭಗೀರಥನ ಕಥೆ, ಋಷ್ಯಶೃಂಗನ ಕಥೆ, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಕಥೆ, ಶಿಬಿಯ ಕಥೆ, ನರಕಾಸುರನ ಕಥೆ, ಅಗಸ್ತ್ಯ ಮತ್ತು ಕುಬೇರರ ಕಥೆ, ನುಷನ ಕಥೆ, ಮನು ಮತ್ತು ಬೃಹತ್‌ ನೌಕೆಯ ಕಥೆ, ಧರ್ಮವ್ಯಾಧನ ಕಥೆ, ಮುದ್ಗಲರ ಕಥೆ, ಶ್ರೀರಾಮನ ಕಥೆ ಹಾಗೂ ಸಾವಿತ್ರಿಯ ಕಥೆಯಿದೆ.

ವಿರಾಟ ಪರ್ವದಲ್ಲಿ ಛದ್ಮವೇಷದ ಆಯ್ಕೆ, ಧೌಮ್ಯರ ಉಪದೇಶ, ಕೊನೆಯ ಸಿದ್ಧತೆಗಳು, ವಿರಾಟನ ಅರಮನೆಯಲ್ಲಿ, ಅಪ್ರತಿಮನಾದ ಮಲ್ಲ, ದ್ರೌಪದಿಗೆ ಕೀಚಕನ ಕಿರುಕುಳ, ನನಗೆ ನೀನೊಬ್ಬನೇ ಗತಿ, ಕೀಚಕನು ದಂಡ ತೆತ್ತ, ಅವನ ಸಂಬಂಧಿಕರಿಗೂ ಸಹ, ಗೋಗ್ರಹಣ, ಪಾರುಗಾಣಿಸಿದ ಪಾಂಡವರು, ಸಾರಥಿಯಾಗಿ ಬೃಹನ್ನಳೆ, ನಾನು ಅರ್ಜುನ, ಮಂತ್ರಾಲೋಚನೆ, ಯುದ್ಧ ಹಾಗೂ ಹೀಗೊಂದು ಪರಿಣಯ ಕುರಿತು ವಿವರಣೆ ನೀಡಲಾಗಿದೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Awards & Recognitions

Related Books