
ಧರ್ಮಕ್ಕೆ ಸಂಬಂಧಿಸಿದ ವಿನೋಬಾ ಭಾವೆಯವರ ವಿಚಾರಗಳ ಸಂಕಲನವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮಿಗಳು. ’ಹಿಂದೂ’ಧರ್ಮ ಶಬ್ದವು ಬಹಳ ಪ್ರಚಲಿತವಾಗಿರುವುದರಿಂದ ಇದರ ನಿಮಿತ್ತವಾಗಿ ವ್ಯಕ್ತವಾದ ವಿಚಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಭಾರತದ ಸಂಪೂರ್ಣ ಜೀವನದೃಷ್ಟಿ ಮತ್ತು ಧಾರ್ಮಿಕ ಜೀವನದೃಷ್ಟಿಯನ್ನು ಇಲ್ಲಿ ಕೇಂದ್ರೀಕರಿಸಿದ್ಧಾರೆ. ವ್ಯಕ್ತಿಯ ಬದುಕಿನ ಆಧ್ಯಾತ್ಮಿಕ ಜೀವನವಿಕಾಸವನ್ನು ’ಧರ್ಮಾಮೃತ’ ಎಂಬ ಸಾರ್ವಕಾಲಿಕ ಮಹತ್ವದ ಕೃತಿಯ ಮೂಲಕ ಓದುಗರಿಗೆ ತಲುಪಿಸಿದ್ದಾರೆ.
©2025 Book Brahma Private Limited.