ಸೋದೆ ಶ್ರೀ ವಿಶ್ವೇಂದ್ರತೀರ್ಥರ ಕೀರ್ತನ ಮಂಜರಿ

Author : ಶ್ರೀನಿವಾಸ ಹಾವನೂರ

Pages 91

₹ 30.00




Year of Publication: 2001
Published by: ಹಾವನೂರಿನ ಶ್ರೀ ವಾದಿರಾಜರ ಮೃತ್ತಿಕಾ ವೃಂದಾವನ ಮಠ
Address: ಅಂಚೆ ಹಾವನೂರ, ಹಾವೇರಿ ಜಿಲ್ಲೆ- 581133

Synopsys

‘ಸೋದೆ ಶ್ರೀ ವಿಶ್ವೇಂದ್ರತೀರ್ಥರ ಕೀರ್ತನ ಮಂಜರಿ’ ಕೃತಿಯನ್ನು ಹಿರಿಯ ಲೇಖಕ ಶ್ರೀನಿವಾಸ ಹಾವನೂರ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಶ್ರೀವಿಶ್ವೋತ್ತಮತೀರ್ಥರ ಆಶೀರ್ವಚನ, ಸಂಪಾದಕನ ಪ್ರಸ್ತಾವನೆ, ಶ್ರೀವಿಶ್ವೇಂದ್ರತೀರ್ಥರ ಚರಿತ್ರೆ, ಕೀರ್ತನೆಗಳ ಸಮೀಕ್ಷೆ, ಕೀರ್ತನೆಗಳು, ಅನುಬಂಧಗಳಲ್ಲಿ ಅ) ಶ್ರೀವಿಶ್ವೇಂದ್ರತೀರ್ಥರ ತುಳು- ಸಂಸ್ಕೃತ ರಚನೆಗಳು, ಆ) ಶ್ರೀ ವಿಶ್ವೇಂದ್ರ ಸ್ತುತಿಪರ ಹಾಡು -ಶ್ರೀ ಪ್ರಹ್ಲಾದಾಚಾರ್ಯ ವಿರಚಿತ, ಇ) ಕೀರ್ತನೆಗಳ ಆಕಾರಾದಿ ಸೂಚಿ. ಹಾಗೂ ಚಿತ್ರಗಳು ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books