ದೇಗುಲ ದರ್ಶನ

Author : ವೈ.ಬಿ. ಕಡಕೋಳ

Pages 192

₹ 160.00




Year of Publication: 2018
Published by: ಎಸ್.ಎಲ್. ಎನ್. ಪಬ್ಲಿಕೇಷನ್ಸ್
Address: # 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560028
Phone: 9972129376

Synopsys

ಲೇಖಕ ವೈ.ಬಿ. ಕಡಕೋಳ ಅವರ ಕೃತಿ-ದೇಗುಲ ದರ್ಶನ. ಕೃತಿಯಲ್ಲಿ ಒಟ್ಟು 34 ಅಧ್ಯಾಯಗಳಿವೆ. ತಿಳಿನೀರಿನ ಜಲಧಾರೆಯ ತಪೋಭೂಮಿ ಬಸಿಡೋಣಿ, ಬೆನಕಟ್ಟಿ ಶ್ರೀ ದುರ್ಗಾದೇವಿ ದೇವಾಲಯ, ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಮಠ ಚಿಕ್ಕುಂಬಿ, ಐತಿಹಾಸಿಕ ದೇವಾಲಯ ತಾಣ ಗೊಡಚಿ, ಭಕ್ತರ ಪಾಲಿನ ಭಾಗ್ಯದೇವತೆ ಗುಡ್ಡಾಪೂರ ದಾನಮ್ಮ ದೇವಿ, ಸಂಕ್ರಾಂತಿ ಹಬ್ಬದ ತೆಪ್ಪೋತ್ಸವ ಮುನವಳ್ಳಿ, ನೂರೊಂದು ಗಣಪತಿ ದೇವಾಲಯ ಮೈಸೂರು, ಜಡಿ ಸಿದ್ದೇಶ್ವರ ಪುಣ್ಯಕ್ಷೇತ್ರ ಸುಣಧೋಳಿ, ಬದಾಮಿ ಬನಶಂಕರಿ, ಇಷ್ಟಾರ್ಥಸಿದ್ಧಿ ನವಲಗುಂದ ಕಾಮದೇವ, ಶಕ್ತಿದೇವತೆ ಹುಲಿಗೆಮ್ಮ, ಕುಂದಾಪುರ ಕುಂದೇಶ್ವರ, ನುಗ್ಗಿಕೇರಿ ಆಂಜನೇಯ ದೇವಾಲಯ, ಶಬರಿಕೊಳ್ಳದ ಶಬರಿ ದೇವಾಲಯ, ತಿರುಪತಿ ತಿಮ್ಮಪ್ಪನ ಅನುಗ್ರಹದ ತುಳಸೀಗೇರಿ ಹಣಮಪ್ಪ, ಅಚ್ಯುತನ ಊರು ಅಚನೂರು ...ಹೀಗೆ ಒಟ್ಟು 34 ಅಧ್ಯಾಯಗಳ ಮೂಲಕ ಧಾರ್ಮಿಕ ತಾಣಗಳನ್ನು ಪರಿಚಯಿಸಿದ್ದಾರೆ.

ಸಾಹಿತಿ ಡಾ. ರೇಣುಕಾ ಅಮಲ್ಜರಿ ಅವರು ಕೃತಿಗೆ ಬೆನ್ನುಡಿ ಬರೆದು ‘ಲೇಖಕರು ಕರ್ನಾಟಕದುದ್ದಕ್ಕೂ ತಾವು ಕಂಡ ದೇವಾಲಯಗಳನ್ನು ಬರೀ ನೋಡಿ ಬರದೇ, ಅದರ ಇತಿಹಾಸವನ್ನೂ ಸಹ ತಿಳಿದು ಬರವಣಿಗೆಗೆ ಇಳಿಸುವ ಮೂಲಕ ಜನಸಾಮಾನ್ಯರಿಗೂ ದೇಶ ಸುತ್ತುವ ಮಹತ್ವವನ್ನು ತಿಳಿಸಿದ್ದಾರೆ. ಹೀಗಾಗಿ, ಕರ್ನಾಟಕ ದೇವಾಲಯಗಳ ಒಂದು ಕೈಪಿಡಿಯಂತೆ ಈ ಕೃತಿ ಉಪಯುಕ್ತ ಮಾಹಿತಿ ನೀಡುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ವೈ.ಬಿ. ಕಡಕೋಳ

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ.  ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...

READ MORE

Related Books