
`ಗಂಗಾಲಹರಿ ಸ್ತೋತ್ರ’ ಕೃತಿಯು ಕೆ. ಗಣಪತಿ ಭಟ್ಟ ಅವರ ಸಂಪಾದಿತ ಸ್ತೋತ್ರ ಕೃತಿಯಾಗಿದೆ. ಈ ಪುಸ್ತಕದಲ್ಲಿ ಗಂಗಾಲಹರಿಸ್ತೋತ್ರದ ಭಾವಾರ್ಥ ಬದಲಿಗೆ ಕನ್ನಡದ ಜಗನ್ನಾಥ ಎಂದೇ ಖ್ಯಾತರಾದ ಪಂ. ಗಲಗಲಿ ಪಂಢರಿನಾಥಾಚಾರ್ಯರು ಬರೆದ ಕಾವ್ಯರೂಪ ಕನ್ನಡ ಗಂಗಾಲಹರಿಯನ್ನು ಮುದ್ರಿಸಲಾಗಿದೆ. ವರಕವಿ ಬೇಂದ್ರೆ, ವಿ. ಕೃ. ಗೋಕಾಕ ಮುಂತಾದ ಗಣ್ಯರು ಈ ಕೃತಿಯನ್ನು ಮೆಚ್ಚಿ ಹೊಗಳಿದ್ದಾರೆ. ಗಂಗಾಲಹರಿ ಸಂಸ್ಕೃತಸ್ತೋತ್ರಪಠನದಷ್ಟೇ ಮುಖ್ಯವಾದದ್ದು ಅದರ ಕರ್ತೃ ಪಂಡಿತರಾಜ ಜಗನ್ನಾಥಕವಿಯ ಜೀವನಚರಿತ್ರೆ ತಿಳಿಯುವುದಾಗಿದೆ. ಕವಿಯ ಪರಿಚಯವನ್ನು ಪಂಢರಿನಾಥಾಚಾರ್ಯರು ತಮ್ಮದೇ ಆದ ಅದ್ಭುತ ಶೈಲಿಯಲ್ಲಿ ಪೋಣಿಸಿದ್ದಾರೆ. ಅದನ್ನು ಲಘುಪುಸ್ತಕ ಹಾಗೂ ಧ್ವನಿಮುದ್ರಿಕೆಯ ರೂಪದಲ್ಲಿ ಪ್ರಕಟಿಸುವ ಸಂಕಲ್ಪವನ್ನು ಪ್ರತಿಷ್ಠಾನ ಮಾಡಿದೆ. ಅದೇ ಶೈಲಿಯಲ್ಲಿ ಗಲಗಲಿ ಆಚಾರ್ಯರ ಪರಿಚಯವನ್ನೂ ಲಿಖಿತಗೊಳಿಸುವಂತೆ ಅವರ ಶಿಷ್ಯರಾದ ಧಾರವಾಡದ ಡಾ. ವೆಂಕಟನರಸಿ೦ಹಾಚಾರ್ಯ ಜೋಶಿ ಅವರನ್ನು ನಿವೇದಿಸಲಾಗಿದೆ.
©2025 Book Brahma Private Limited.